Advertisement

ಮುಂದಿನ 24 ಗಂಟೆ ಜಾಗರೂಕರಾಗಿರಿ : ಕೈ ಕಾರ್ಯಕರ್ತರಿಗೆ ರಾಹುಲ್‌

07:26 AM May 23, 2019 | Team Udayavani |

ಹೊಸದಿಲ್ಲಿ: ಇಡೀ ದೇಶವೇ ಫ‌ಲಿತಾಂಶಕ್ಕಾಗಿ ಎದುರು ನೋಡುತ್ತಿರುವ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಟ್ವೀಟ್‌ ಮಾಡಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ವಿಶ್ವಾಸ ತುಂಬಿದ್ದಾರೆ.

Advertisement

ಕಾಂಗ್ರೆಸ್ ಪಕ್ಷದ ಆತ್ಮೀಯ ಕಾರ್ಯಕರ್ತರೆ,ಮುಂದಿನ 24 ಗಂಟೆಗಳ ಮುಖ್ಯವಾದುದ್ದು. ಜಾಗರೂಕರಾಗಿರಿ . ಹೆದರಬೇಡಿ ನೀವು ಸತ್ಯಕ್ಕಾಗಿ ಹೋರಾಟ ಮಾಡುತ್ತಿದ್ದೀರಿ. ನಕಲಿ ಎಕ್ಸಿಟ್‌ ಪೋಲ್‌ಗ‌ಳ ಸುಳ್ಳು ಪ್ರಚಾರಗಳಿಂದ ನಿರಾಶರಾಬೇಡಿ. ನಿಮ್ಮ ಮೇಲೆ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಡಿ, ನಿಮ್ಮ ಕಠಿಣ ಶ್ರಮ ವ್ಯರ್ಥವಾಗುವುದಿಲ್ಲ ಜೈ ಹಿಂದ್, ಎಂದು ಟ್ವೀಟ್‌ ಮಾಡಿದ್ದಾರೆ.

ಬಹುತೇಕ ಸಮೀಕ್ಷೆಗಳು ಎನ್‌ಡಿಎ ಭರ್ಜರಿ ಜಯ ಗಳಿಸಿ ಮೋದಿ ಮತ್ತೆ ಪ್ರಧಾನಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದಿವೆ.

Advertisement

Udayavani is now on Telegram. Click here to join our channel and stay updated with the latest news.

Next