Advertisement

NRC ಜಾರಿ ಮಾಡಿದ್ರೆ ಹುಷಾರ್‌: ಸಚಿವ ಶಂತನುಗೆ ಉಗ್ರ ಸಂಘಟನೆಯಿಂದ ಬೆದರಿಕೆ?

12:46 PM Apr 09, 2024 | Team Udayavani |

ಕೋಲ್ಕತಾ: “ಪಶ್ಚಿಮ ಬಂಗಾಲದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಜಾರಿಗೊಳಿಸಿದರೆ, ಮುಸ್ಲಿಮರಿಗೆ ಹಿಂಸೆ ನೀಡಿದರೆ ದೇಶವೇ ಹೊತ್ತಿ ಉರಿಯಲಿದೆ.’ ಹೀಗೆಂದು ಕೇಂದ್ರ ಸಚಿವ ಶಂತನು ಠಾಕೂರ್‌ ಅವರಿಗೆ ಉಗ್ರ ಸಂಘಟನೆ ಲಷ್ಕರ್‌-ಎ-ತೊಯ್ಬಾ ಹೆಸರಿನಲ್ಲಿ ಬೆದರಿಕೆ ಪತ್ರ ಬರೆಯಲಾಗಿದೆ.

Advertisement

“ಠಾಕೂರ್‌ ಭಾಯ್‌ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ. ಅವರಿಗೆ ಬಂದಿರುವ ಪತ್ರದ ಫೋಟೋ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಶಂತನು, “ಪತ್ರ ನೋಡಿ ನನಗೆ ಆಘಾತವಾಗಿದೆ’ ಎಂದಿದ್ದಾರೆ.
ಇತ್ತೀಚೆಗಷ್ಟೇ ಸಚಿವ ಶಂತನು ಅವರು, “ಎನ್‌ಆರ್‌ಸಿ ಜಾರಿಯಾದರೆ ಟಿಎಂಸಿಯ ಒಬ್ಬ ಕಾರ್ಯಕರ್ತನಿಗೂ ಪೌರತ್ವ ಸಿಗದಂತೆ ನೋಡಿಕೊಳ್ಳುತ್ತೇನೆ’ ಎಂದಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಪತ್ರದಲ್ಲೇನಿದೆ?
ಮುಸ್ಲಿಮರಿಗೆ ಹಿಂಸೆ ನೀಡಿದರೆ ಠಾಕೂರ್‌ಬಾರಿಯನ್ನು ನೆಲಕ್ಕುರುಳಿಸುತ್ತೇವೆ.
ಬಂಗಾಲದಲ್ಲಿ ಎನ್‌ಆರ್‌ಸಿ ಜಾರಿಯಾದರೆ, ಇಡೀ ದೇಶ ಹೊತ್ತಿ ಉರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next