Advertisement

ಲೆ|ಜ|ಬಿ.ಸಿ. ನಂದ ಅಂತ್ಯಸಂಸ್ಕಾರ

10:08 AM Dec 14, 2018 | Team Udayavani |

ಮಡಿಕೇರಿ: ಭಾರತೀಯ ಸೇನಾ ಪಡೆಯಲ್ಲಿ ತಮ್ಮ ಉನ್ನತ ಸ್ತರದ ಕಾರ್ಯವೈಖರಿಗಳ ಮೂಲಕ ಅಚ್ಚಳಿಯದ ಛಾಪು ಮೂಡಿಸಿದ್ದ ಲೆ| ಜ| ಬಿ.ಸಿ. ನಂದ ಅವರ ಅಂತ್ಯಸಂಸ್ಕಾರ ಸಕಲ ಸೇನಾ ಗೌರವಗಳೊಂದಿಗೆ ನಗರದಂಚಿನ ಅವರ ತೋಟದಲ್ಲಿ ನೆರವೇರಿತು.

Advertisement

ಮೂಲತಃ ಮಹರ್‌ ರೆಜಿಮೆಂಟಿನ, ಪ್ರಸ್ತುತ ಮೈಸೂರಿನಲ್ಲಿ ಎನ್‌ಸಿಸಿ ಕಮಾಂಡೆಂಟ್‌ ಆಗಿರುವ ಕ| ಎಂ.ಕೆ. ಬೆಳ್ಯಪ್ಪ ಮತ್ತು ಮದ್ರಾಸ್‌ ಸ್ಯಾಪರ್ಸ್‌ ತಂಡದ ನೇತೃತ್ವ ವಹಿಸಿದ್ದ ಲೆ| ಕ| ದಿನೇಶ್‌ ಕುಮಾರ್‌ ನೇತೃತ್ವದ 21 ಮಂದಿಯ ತಂಡ ಅಗಲಿದ ಸೇನಾಧಿಕಾರಿಗೆ ಮೂರು ಸುತ್ತಿನ ಕುಶಾಲತೋಪು ಸಿಡಿಸಿ ಅಂತಿಮ ಗೌರವ ಸಲ್ಲಿಸಿತು.

ಪತ್ನಿ ಲೀಲಾ ನಂದ ಹಾಗೂ ದ್ವಿತೀಯ ಪುತ್ರಿ ದೇವಿಕಾ ಕೊಡವ ಸಂಪ್ರದಾಯದಂತೆ ಅಂತಿಮ ವಿಧಿಗಳನ್ನು ನೆರವೇರಿಸಿದರು. ಫೀ|ಮಾ| ಕಾರ್ಯಪ್ಪ ಮತ್ತು ಜ| ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕ| ಕಂಡ್ರತಂಡ ಸಿ. ಸುಬ್ಬಯ್ಯ, ಸಂಚಾಲಕರಾದ ಮೇ| ಬಿ.ಎ. ನಂಜಪ್ಪ ಮತ್ತು ಕುಟುಂಬಸ್ಥರು ಸಹಕರಿಸಿದರು. ನಂದ ಅವರ ಆಶಯದಂತೆ ಪಾರ್ಥಿವ ಶರೀರವನ್ನು ತೋಟದಲ್ಲಿ ಭೂ ತಾಯಿಯ ಮಡಿಲಿಗೆ ಅರ್ಪಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next