Advertisement

ಮ್ಯಾನೇಜರ್‌ ಹುದ್ದೆ ಆಕಾಂಕ್ಷಿಗಳಿಗೆ ಬಿಸಿಸಿಐನಿಂದ ಬೌನ್ಸರ್‌ ಪ್ರಶ್ನೆ

09:55 AM Jul 27, 2017 | Team Udayavani |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಮ್ಯಾನೇಜರ್‌ ಹುದ್ದೆ ಸಂದರ್ಶನಕ್ಕೆ ತೆರಳಿದ ಅಭ್ಯರ್ಥಿಗಳು ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ)ಯ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೆ ಒದ್ದಾಡಿದ ಘಟನೆ ನಡೆದಿದೆ.

Advertisement

ಸಾಮಾನ್ಯವಾಗಿ ಸಂದರ್ಶನಕ್ಕೆ ತೆರಳುವ ಅಭ್ಯರ್ಥಿಗಳಿಗೆ ಭಯ ಇರುತ್ತದೆ. ಯಾವ ಪ್ರಶ್ನೆ ಎದುರಾಗುತ್ತದೋ? ಅದಕ್ಕೆ ಹೇಗೆ ಉತ್ತರಿಸುತ್ತೇನೋ? ಎಂಬ ಆತಂಕ ಕಾಡುತ್ತಿರುತ್ತದೆ. ಅಂತೆಯೆ ಬಿಸಿಸಿಐ ಸಂದರ್ಶನಕ್ಕೆ ತೆರಳಿದ 12 ಮಂದಿ ಅಭ್ಯರ್ಥಿಗಳಿಗೆ ಭಯ ಇತ್ತು. ಆದರೆ ದಿಲ್ಲಿ ಹಾಗೂ ಮುಂಬಯಿಯಲ್ಲಿ ಮಂಗಳವಾರ ನಡೆದ ಪ್ರತ್ಯೇಕ ಸಭೆಯಲ್ಲಿ ಬಿಸಿಸಿಐ ಸಂದರ್ಶಕರು ಕೇಳಿದ ಒಂದು ಪ್ರಶ್ನೆಗೆ ಅಭ್ಯರ್ಥಿಗಳು ಉತ್ತರ ನೀಡಲು ಒದ್ದಾಡಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಏನಿದು ಪ್ರಶ್ನೆ?: ವಿರಾಟ್‌ ಕೊಹ್ಲಿ ಹಾಗೂ ಅನಿಲ್‌ ಕುಂಬ್ಳೆ ನಡುವಿನ ವಿವಾದ ಬಗ್ಗೆ ಪ್ರಶ್ನೆಯನ್ನು ಬಿಸಿಸಿಐ ಕೇಳಿದೆ. ಆ ಪ್ರಶ್ನೆ ಹೀಗಿದೆ. ಕೊಹ್ಲಿ-ಕುಂಬ್ಳೆ ನಡುವಿನ ವಿವಾದದಂತಹ ಸನ್ನಿವೇಶವನ್ನು ನೀವು ಹೇಗೆ ನಿಭಾಯಿಸುತ್ತೀರಿ? ಎಂಬುದಾಗಿತ್ತು. ಕೆಲ ದಿನಗಳ ಹಿಂದೆ ಕೊಹ್ಲಿ-ಕುಂಬ್ಳೆ ವಿವಾದ ಬಗೆ ಹರಿಸಲು ಮ್ಯಾನೇಜರ್‌ ಹುದ್ದೆಯಲ್ಲಿದ್ದ ಕಪಿಲ್‌ ಮಲ್ಹೋತ್ರ ವಿಫ‌ಲರಾಗಿದ್ದರು. ಬಳಿಕ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಹಾಗಾಗಿ ಹೊಸ ಅಭ್ಯರ್ಥಿಗಳಿಗಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಅನುಭವಿಗಳಿಗೆ ಮೊದಲ ಆದ್ಯತೆ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next