Advertisement

ರಣಜಿ ಅಂಕಣ ಹೇಗಿರಬೇಕೆಂದು ಇನ್ನೂ ತಿಳಿಸದ ಬಿಸಿಸಿಐ!

09:55 AM Dec 10, 2019 | Team Udayavani |

ಹೊಸದಿಲ್ಲಿ: ಸೋಮವಾರದಿಂದ ರಣಜಿ ಪಂದ್ಯಾವಳಿ ಆರಂಭವಾಗಲಿದೆ. ಆದರೆ ಬಿಸಿಸಿಐ ಇನ್ನೂ ಅಂಕಣ ಹೇಗಿರಬೇಕೆಂಬ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿಲ್ಲ ಎಂದು ಕ್ಯುರೇಟರ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಅಂಕಣವನ್ನು ಸಿದ್ಧಪಡಿಸುವ ಹೊಣೆ ಹೊತ್ತಿರುವ ಕ್ಯುರೇಟರ್‌ಗಳಿಗೆ ಬಿಸಿಸಿಐ ನಿರ್ದೇಶನ ನೀಡುತ್ತದೆ. ಹಾಗೆಯೇ ಒಂದು ಕಮ್ಮಟ ನಡೆಸಿ ತಿಳಿವಳಿಕೆ ನೀಡುತ್ತದೆ. ಈ ಬಾರಿ ಅದಾಗಿಲ್ಲ ಎನ್ನುವುದು ಕ್ಯುರೇಟರ್‌ಗಳ ಆಕ್ರೋಶಕ್ಕೆ ಕಾರಣ. ಬಿಸಿಸಿಐನ ಮುಖ್ಯ ಕ್ಯುರೇಟರ್‌ ಆಶಿಷ್‌ ಭೌಮಿಕ್‌ ಕೂಡ ತಮಗೆ ಬಿಸಿಸಿಐನಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಖಚಿತಪಡಿಸಿದ್ದಾರೆ.

ಇದರ ಪರಿಣಾಮ ಕ್ಯುರೇಟರ್‌ಗಳು ಒತ್ತಡಕ್ಕೆ ಸಿಲುಕಿದ್ದಾರೆ. ಪಂದ್ಯ ಶುರುವಾಗಿ ಮೊದಲನೇ ದಿನ ಕಳೆಯುವವರೆಗೆ ತಟಸ್ಥರಾಗಿದ್ದ ಕ್ಯುರೇಟರ್‌ಗಳಿಗೆ ಮೈದಾನದಲ್ಲೇ ಇರಲು ತಿಳಿಸಲಾಗಿದೆ. ಮುಂಚಿನಂತೆ ಪಂದ್ಯಾರಂಭಗೊಂಡ ಕೂಡಲೇ ಹೊರಡಲು ಬಿಡುತ್ತಿಲ್ಲ ಎಂದು ಕ್ಯುರೇಟರ್‌ಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next