Advertisement

 ಬಿ.ಸಿ.ರೋಡ್‌-ಶಿರಾಡಿ ರಾಷ್ಟ್ರೀಯ ಹೆದ್ದಾರಿ ಕಾಣಿಸಿಕೊಂಡ ಹೊಂಡ; ಜಲ್ಲಿಹುಡಿಯ ತೇಪೆ

08:25 PM Jun 23, 2021 | Team Udayavani |

ಬಂಟ್ವಾಳ: ಕಳೆದ ವರ್ಷ ಹೊಂಡ ಗುಂಡಿಗಳಿಂದ ತುಂಬಿ ಪೂರ್ತಿ ಹದಗೆಟ್ಟು ಸಂಚಾರ ದುಸ್ತರವಾಗಿದ್ದ ಬಿ.ಸಿ.ರೋಡ್‌-ಶಿರಾಡಿ ರಾಷ್ಟ್ರೀಯ ಹೆದ್ದಾರಿಗೆ ಕೆಲವು ತಿಂಗಳ ಹಿಂದೆ ಪೂರ್ತಿ ಡಾಮಾರು ಕಾಮಗಾರಿ ನಡೆದಿತ್ತು. ಆದರೆ ಮಳೆ ಆರಂಭ ವಾಗಿ ಕೆಲವೇ ದಿನಗಳಲ್ಲಿ ಅಲ್ಲಲ್ಲಿ ಹೊಂಡಗಳು ಕಾಣಿಸಿಕೊಂಡು ಮತ್ತೆ ಹಿಂದಿನ ಸ್ಥಿತಿಗೆ ಬರುವ ಸೂಚನೆ ನೀಡುತ್ತಿದೆ.

Advertisement

ಹೆದ್ದಾರಿ ಹೆಚ್ಚು ಹದಗೆಡುವ ಕಲ್ಲಡ್ಕ ಬಳಿಯ ನರಹರಿ ಪರ್ವತ ತಿರುವು ಸೇರಿದಂತೆ ಬಹುತೇಕ ಕಡೆಗಳಲ್ಲಿ ಹೊಂಡಗಳು ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮಳೆಗೆ ಹೊಂಡಗಳ ಗಾತ್ರ ಹಿರಿದಾಗುವ ಸಾಧ್ಯತೆ ಹೆಚ್ಚಿದೆ. ಹೆದ್ದಾರಿ ಹೊಸದಾಗಿ ಡಾಮಾರು ನಡೆದಂತೆ ಹೊಳೆಯುತ್ತಿದ್ದು, ವೇಗವಾಗಿ ಬಂದರೆ ಅಪಾಯದ ಸಾಧ್ಯತೆ ಹೆಚ್ಚಿದೆ.

ಹೆದ್ದಾರಿ ಅವ್ಯವಸ್ಥೆಯ ವಿರುದ್ಧ ಹಲವು ಹೋರಾ ಟಗಳು ನಡೆದು, ಬಳಿಕ ಡಾಮರು ಕಾಮಗಾರಿ ನಡೆದಿತ್ತು. ಡಾಮರು ಕಾಮಗಾರಿ ನಡೆದ ಬಳಿಕ ಹೆದ್ದಾರಿ ಸುಸಜ್ಜಿತಗೊಂಡು ವಾಹನಗಳ ಓಡಾಟದ ವೇಗವೂ ಹೆಚ್ಚಿತ್ತು. ಆದರೆ ಇದೀಗ ಹೊಂಡಗಳು ಕಾಣಿಸಿಕೊಳ್ಳುವ ಮುನ್ಸೂಚನೆ ಲಭಿಸಿದೆ.

ತೇಪೆ ಉಳಿಯುವ ಸಾಧ್ಯಯೂ ಕಡಿಮೆ :

ಈಗ ಹೊಂಡಕ್ಕೆ ಡಾಮಾರು ಹಾಕಿದರೆ ಬಿಸಿಲು ಬೀಳದೇ ಹೋದಲ್ಲಿ ತೇಪೆ ಉಳಿಯುವ ಸಾಧ್ಯಯೂ ಕಡಿಮೆ ಇದೆ.

Advertisement

ಡಸ್ಟ್‌ ಹಾಕಿ ಗುಂಡಿ  ಮುಚ್ಚುವ ಕಾರ್ಯ : ಪ್ರಸ್ತುತ ಕಾಣಿಸಿಕೊಂಡಿರುವ ಗುಂಡಿ ಯನ್ನು ಇಲಾಖೆಯು ಜಲ್ಲಿ ಹುಡಿ (ಡಸ್ಟ್‌) ಹಾಕಿ ಮುಚ್ಚುವ ಕಾರ್ಯ ನಡೆಸಿದ್ದು, ಬುಧವಾರ ಉಪ್ಪಿನಂಗಡಿ ಭಾಗದಿಂದ ಕಲ್ಲಡ್ಕ-ಮೆಲ್ಕಾರ್‌ವರೆಗೆ ಹೊಂಡಗಳಿಗೆ ಜಲ್ಲಿ ಹುಡಿ ಹಾಕಲಾಗಿದೆ. ಈ ಹಿಂದೆಯೂ ಅನೇಕ ಬಾರಿ ಜಲ್ಲಿ ಹುಡಿ ಹಾಕಿ ಹೊಂಡ ಮುಚ್ಚುವ ಪ್ರಯತ್ನ ಮಾಡಲಾಗಿತ್ತು. ಆದರೆ ಅದು ಒಂದೆರಡು ಮಳೆಯಲ್ಲೇ ಪೂರ್ತಿ ಎದ್ದು ಹೋಗುತ್ತದೆ.

ಈಗ ಹೊಂಡಕ್ಕೆ ಡಾಮಾರು ಹಾಕಿದರೆ ಬಿಸಿಲು ಬೀಳದೇ ಹೋದಲ್ಲಿ ತೇಪೆ ಉಳಿಯುವ ಸಾಧ್ಯಯೂ ಕಡಿಮೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next