Advertisement
ಹೆದ್ದಾರಿ ಹೆಚ್ಚು ಹದಗೆಡುವ ಕಲ್ಲಡ್ಕ ಬಳಿಯ ನರಹರಿ ಪರ್ವತ ತಿರುವು ಸೇರಿದಂತೆ ಬಹುತೇಕ ಕಡೆಗಳಲ್ಲಿ ಹೊಂಡಗಳು ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮಳೆಗೆ ಹೊಂಡಗಳ ಗಾತ್ರ ಹಿರಿದಾಗುವ ಸಾಧ್ಯತೆ ಹೆಚ್ಚಿದೆ. ಹೆದ್ದಾರಿ ಹೊಸದಾಗಿ ಡಾಮಾರು ನಡೆದಂತೆ ಹೊಳೆಯುತ್ತಿದ್ದು, ವೇಗವಾಗಿ ಬಂದರೆ ಅಪಾಯದ ಸಾಧ್ಯತೆ ಹೆಚ್ಚಿದೆ.
Related Articles
Advertisement
ಡಸ್ಟ್ ಹಾಕಿ ಗುಂಡಿ ಮುಚ್ಚುವ ಕಾರ್ಯ : ಪ್ರಸ್ತುತ ಕಾಣಿಸಿಕೊಂಡಿರುವ ಗುಂಡಿ ಯನ್ನು ಇಲಾಖೆಯು ಜಲ್ಲಿ ಹುಡಿ (ಡಸ್ಟ್) ಹಾಕಿ ಮುಚ್ಚುವ ಕಾರ್ಯ ನಡೆಸಿದ್ದು, ಬುಧವಾರ ಉಪ್ಪಿನಂಗಡಿ ಭಾಗದಿಂದ ಕಲ್ಲಡ್ಕ-ಮೆಲ್ಕಾರ್ವರೆಗೆ ಹೊಂಡಗಳಿಗೆ ಜಲ್ಲಿ ಹುಡಿ ಹಾಕಲಾಗಿದೆ. ಈ ಹಿಂದೆಯೂ ಅನೇಕ ಬಾರಿ ಜಲ್ಲಿ ಹುಡಿ ಹಾಕಿ ಹೊಂಡ ಮುಚ್ಚುವ ಪ್ರಯತ್ನ ಮಾಡಲಾಗಿತ್ತು. ಆದರೆ ಅದು ಒಂದೆರಡು ಮಳೆಯಲ್ಲೇ ಪೂರ್ತಿ ಎದ್ದು ಹೋಗುತ್ತದೆ.
ಈಗ ಹೊಂಡಕ್ಕೆ ಡಾಮಾರು ಹಾಕಿದರೆ ಬಿಸಿಲು ಬೀಳದೇ ಹೋದಲ್ಲಿ ತೇಪೆ ಉಳಿಯುವ ಸಾಧ್ಯಯೂ ಕಡಿಮೆ ಇದೆ.