Advertisement
ಕೈಕುಂಜೆ ರಸ್ತೆ ಅಭಿವೃದ್ಧಿಯ ದೃಷ್ಟಿಯಿಂದ ಈ ರಂಗಮಂದಿರವನ್ನು ತೆರವುಗೊಳಿಸುವ ಕಾರ್ಯ ಗುರುವಾರ ಆರಂಭಗೊಂಡಿದೆ.
Related Articles
Advertisement
ಈ ರಂಗಮಂದಿರಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಿಂತ ಬಳಿಕ ಬಂಟ್ವಾಳಕ್ಕೆ ರಂಗಮಂದಿರವೊಂದು ಬೇಕು ಎಂಬ ಬೇಡಿಕೆ ಕೇಳಿಬರುತ್ತಿತ್ತು. ಹಿಂದೊಮ್ಮೆ ಬಿ.ಸಿ.ರೋಡ್ನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ರಂಗಮಂದಿರ ನಿರ್ಮಾಣದ ಮಾತುಗಳು ಕೇಳಿಬಂದಿದ್ದು, ಆದರೆ ಅದು ನಿರ್ಮಾಣಗೊಂಡಿಲ್ಲ.ರಂಗಮಂದಿರವು ರಸ್ತೆಗೆ ತಾಗಿಕೊಂಡಿರುವುದರಿಂದ ಪ್ರಸ್ತುತ ಕಾಮಗಾರಿ ಮುಂದುವರಿಯಲು ರಂಗ ಮಂದಿರ ತೆರವುಗೊಳ್ಳುತ್ತಿದ್ದು, ಗುರು ವಾರ ಅದರ ಒಳಗಿದ್ದ ಸೊತ್ತುಗಳು, ಮೇಲ್ಛಾವಣಿ ಯನ್ನು ತೆರವುಗೊಳಿಸುವ ಕಾರ್ಯ ನಡೆದಿದೆ. ಮುಂದೆ ಜೇಸಿಬಿ ಯಂತ್ರದ ಮೂಲಕ ಪೂರ್ಣವಾಗಿ ನೆಲಸಮಗೊಳಿಸಲಾಗುತ್ತಿದೆ.
ಅಟಲ್ ಜನಸ್ನೇಹಿ ಕೇಂದ್ರ :
ಈ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಂತು ಹೋದ ಬಳಿಕ ಹಾಗೇ ಉಳಿದಿದ್ದ ರಂಗಮಂದಿರದಲ್ಲಿ ಬಂಟ್ವಾಳ ತಾಲೂಕು ಕಚೇರಿಯ ಅಟಲ್ ಜನಸ್ನೇಹಿ ಕೇಂದ್ರ ಕಾರ್ಯಾಚರಿಸುತ್ತಿತ್ತು. ಇದನ್ನು ಕೇಂದ್ರಕ್ಕೆ ಬೇಕಾದ ರೀತಿಯಲ್ಲಿ ಪರಿವರ್ತನೆಗೊಳಿಸಲಾಗಿತ್ತು. ಜನಸ್ನೇಹಿ ಕೇಂದ್ರವು ಮಿನಿ ವಿಧಾನಸೌಧಕ್ಕೆ ಸ್ಥಳಾಂತರ ಗೊಂಡ ಬಳಿಕ ರಂಗಮಂದಿರ ಪಾಳು ಬಿದ್ದ ಸ್ಥಿತಿಯಲ್ಲಿತ್ತು.