Advertisement

ಬಿ.ಸಿ. ರೋಡ್‌: 6 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭ

11:43 PM Apr 25, 2019 | Team Udayavani |

ಬಂಟ್ವಾಳ: ಎಸ್‌ಕೆಎಸ್‌ಎಸ್‌ಎಫ್‌ ಬಂಟ್ವಾಳ ಕೇಂದ್ರ ಘಟಕ ಬಂಟ್ವಾಳ ಕೆಳಗಿನ ಪೇಟೆ ಇದರ 5ನೇ ವಾರ್ಷಿ ಕೋತ್ಸವದ ಅಂಗವಾಗಿ ಎ. 25ರಂದು ಬಿ.ಸಿ. ರೋಡ್‌ ಸ್ವರ್ಶ ಕಲಾ ಮಂದಿರದ ಶಂಶುಲ್‌ ಉಲೆಮಾ ನಗರ, ಅಬ್ದುಲ್‌ ಜಬ್ಟಾರ್‌ ಉಸ್ತಾದ್‌ ವೇದಿಕೆಯಲ್ಲಿ 6 ಜೋಡಿಗಳ ಸರಳ ಸಾಮೂಹಿಕ ವಿವಾಹ ಸಮಾರಂಭ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ನಡೆಯಿತು.

Advertisement

ಬಹು| ರಶೀದ್‌ ಅಲಿ ಶಿಹಾಬ್‌ ತಂšಳ್‌ ಕಾರ್ಯಕ್ರಮ ಉದ್ಘಾಟಿಸಿ, ದುಆಃ ನೆರವೇರಿಸಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಹು| ತ್ವಾಖ ಅಹಮದ್‌ ಮುಸ್ಲಿಯಾರ್‌ ನಿಖಾಹ್‌ ನೇತೃತ್ವ ವಹಿಸಿದರು. ಎಸ್‌ಕೆಎಸ್‌ಎಸ್‌ಎಫ್‌ ಬಂಟ್ವಾಳ ಕೇಂದ್ರ ಘಟಕದ ಅಧ್ಯಕ್ಷ ಜ| ಇಸ್ಮಾಯಿಲ್‌ ಅರಬಿ ಸಭಾಧ್ಯಕ್ಷತೆ ವಹಿಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿದರು.

ದ.ಕ. ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ, ಬಂಟ್ವಾಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಬಿ ಕುಂದರ್‌, ಜಿ.ಪಂ. ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ, ಮಂಗಳೂರು ಮುದ್ರರಿಸ್‌ ಕೇಂದ್ರ ಜುಮಾ ಮಸೀದಿ ಬಹು| ಸ್ವದಖತುಲ್ಲಾ ಫೈಝಿ, ಕಣ್ಣೂರ್‌ ಮುದರಿಸ್‌ ಅನ್ಸಾರ್‌ ಫೈಝಿ ಆಲ್‌ ಬುರ್ಹಾನಿ, ಮಿತ್ತಬೈಲ್‌ ಮುದರ್ರಿಸ್‌ ಆಶ್ರಫ್‌ ಫೈಝಿ ಕೊಡಗು, ವಳಚ್ಚಿಲ್‌ ಮುದರ್ರಿಸ್‌ ಅಬ್ದುಲ್‌ ಖಾದರ್‌ ದಾರಿಮಿ ಕುಕ್ಕಿಲ, ಎಸ್‌ಕೆಎಸ್‌ಎಸ್‌ಎಫ್‌ ಬಂಟ್ವಾಳ ವಲಯ ಅಧ್ಯಕ್ಷ ಕೆ.ಪಿ. ಇರ್ಷಾದ್‌ ದಾರಿಮಿ, ಬೆಳ್ತಂಗಡಿ ವಲಯ ಅಧ್ಯಕ್ಷ ನಝೀರ್‌ ಆಝಹರಿ, ಯೂಸುಫ್ ಮುಸ್ಲಿಮಾರ್‌, ಸ್ವಾದಿಕ್‌ ಆಝ್ಹರಿ ಕೊಪ್ಪ, ಇಬ್ರಾಹಿಂ ಗೋಳಿಕಟ್ಟೆ, ಯೂಸುಫ್ ಕರಂದಾಡಿ, ರಿಯಾಝ್ ಹುಸೈನ್‌, ಯು.ಕೆ. ಮೋನು, ಅನ್ವರ್‌ ಆಝ್ಹರಿ ಉಪಸ್ಥಿತರಿದ್ದರು. ಬಂಟ್ವಾಳ ಜುಮಾ ಮಸೀದಿಯ ಬಹು| ಉಸ್ಮಾನ್‌ ದಾರಿಮಿ ಸ್ವಾಗತಿಸಿ, ಮೊಹಮ್ಮದ್‌ ತೌವಾಝ ವಂದಿಸಿದರು. ಲತೀಫ್‌ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next