Advertisement

ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗುತ್ತಿದೆ ಎನ್ನಲು ಇಂದಿನ ಫಲಿತಾಂಶ ನಿದರ್ಶನ: ಬಿ.ಸಿ.ಪಾಟೀಲ್

03:44 PM Nov 10, 2020 | sudhir |

ಕೊಪ್ಪಳ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗುತ್ತಿದೆ ಎಂಬುದಕ್ಕೆ ಇಂದಿನ ಚುನಾವಣಾ ಫಲಿತಾಂಶ ಸ್ಪಷ್ಟ ನಿದರ್ಶನವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

Advertisement

ಕೊಪ್ಪಳದಲ್ಲಿ ಮಾತನಾಡಿದ ಸಚಿವರು ರಾಜರಾಜೇಶ್ವರೀ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಭರ್ಜರಿ ಗೆಲುವು ಸಾದಿಸುತ್ತಿದ್ದಂತೆ ಅಭಿನಂದಿಸಿದ ಅವರು ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗುತ್ತಿದೆ ಎನ್ನುವುದಕ್ಕೆ ಇದು ಮುನ್ಸೂಚನೆಯಾಗಿದೆ ಕೇವಲ ಕೆಲವೇ ಜನರ ಹಿಡಿತದಲ್ಲಿ ಕಾಂಗ್ರೆಸ್ ಪಕ್ಷ ಇದೆಯಷ್ಟೇ ಅಲ್ಲದೆ ರಾಜ್ಯದಲ್ಲಿ ಜೆಡಿಎಸ್ ಪಕ್ಷ ನೆಲಕಚ್ವಿದೆ ಎಂದರು.

ಈ ಹಿಂದೆ ಮುನಿರತ್ನ ಚುನಾವಣೆಯಲ್ಲಿ ಗೆದ್ದರೆ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿಗಳು ಮಾತು ನೀಡಿದ್ದರು ಅದರಂತೆ ಮುನಿರತ್ನ ಸಚಿವರಾಗುತ್ತಾರೆ ಎಂದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣವಾದವರಿಗೆ ಕೈ ಹಿಡಿಯುವುದು ಕರ್ತವ್ಯ ಆ ಕರ್ತವ್ಯ ಮಾಡುತ್ತಾರೆ ಎಂದರು.

ಇದನ್ನೂ ಓದಿ:ಕೆರೆಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

ಈಗ ಬಂಡೆಗಳು ಎಲ್ಲಿಗೆ ಹೋದವು, ಆ ಬಂಡೆ, ಈ ಬಂಡೆ ಎಲ್ಲಿಗೆ ಹೋದವು ಎಂದು ವ್ಯಂಗ್ಯವಾಡಿದರು.

Advertisement

ಚುನಾವಣಾ ಫಲಿತಾಂಶ ಸರಕಾರಕ್ಕೆ ಒಂದು ಸರ್ಟಿಫಿಕೇಟ್ ಇದ್ದಂತೆ. ಸಂಕಷ್ಟದ ಸಮಯದಲ್ಲಿ ಯಡಿಯೂರಪ್ಪ, ಮೋದಿ ಅವರ ಆಡಳಿತ ಮೆಚ್ವಿದ್ದಾರೆ. ಆರ್ ಆರ್ ನಗರ , ಶಿರಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಗೆಲುವಿನತ್ತ ಸಾಗುತ್ತಿದ್ದಾರೆ, ಮಧ್ಯಪ್ರದೇಶ, ಬಿಹಾರದಲ್ಲಿಯೂ ಎನ್ ಡಿಎ ಪರವಾಗಿ ಇದೆ ಬಿಜೆಪಿ ಆಡಳಿತಕ್ಕೆ ಜನರು ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next