Advertisement

ಸಿದ್ದರಾಮಯ್ಯ ಆಟ, ಕಾಂಗ್ರೆಸ್ ಗೆ ಗೂಟ : ಬಿಸಿ ಪಾಟೀಲ್

02:44 PM Nov 28, 2019 | Suhan S |

ಹಾವೇರಿ:  ಕುರಿ ಕೋಳಿ ಎಮ್ಮೆ ಥರ ಶಾಸಕರು ಮಾರಾಟ ಆದರು ಅಂತಾ ಹೇಳುತ್ತಾ ಇದ್ದೀರಾ  ಸಿದ್ದರಾಮಯ್ಯನವರೆ ನಾನು ನಿಮಗೆ ಕೇಳುತ್ತಿನಿ ಕಾಂಗ್ರೆಸ್ ಪಕ್ಷಕ್ಕೆ ಹೋದ್ರಿ ಅಲ್ವಾ ಎಷ್ಟು ಕೋಟಿಗೆ ಮಾರಿಕೊಂಡ್ರಿ ಸಿದ್ದರಾಮಯ್ಯನವರೆ? ಎಂದು ಬಿಜೆಪಿ ಅಭ್ಯರ್ಥಿ ಬಿಸಿ ಪಾಟೀಲ್ , ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನೆಡೆಸಿದರು.

Advertisement

ಹಿರೆಕೇರೂರಿನ ತಮ್ಮ ಸ್ವಗ್ರಹದಲ್ಲಿ  ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ನೀವೂ ಮಾರಿಕೊಂಡಿದ್ದಕ್ಕೆ ತಾನೆ . ನಿಮಗೆ ಈ ಸಂಸ್ಕೃತಿ ಗೊತ್ತಿರೊದು. ಇಂಥಾ ಕೀಳುಮಟ್ಟದ ರಾಜಕಾರಣ ಮಾಡುತ್ತಾ ಇದಿರಾ ನಿಮಗೇನು ದಿನ ದುಡ್ಡು ಬಂದಿತ್ತಾಕಾಂಗ್ರೆಸ್ ಪಕ್ಷ ಸೇರುವ ಉದ್ದೇಶದಿಂದಲೇ ಜೆಡಿಎಸ್ ಪಕ್ಷ ಬಿಟ್ರಿ ಅವಾಗ ದೇವೆಗೌಡರ ಬೆನ್ನಿಗೆ ಚೂರಿ ಹಾಕಿದ್ದವರು ನೀವೇ ಎಂದು ವಾಗ್ದಾಳಿ ನಡೆಸಿದರು.

ಗೌರವಯುತವಾಗಿ ನಾನು ಮಾಡಿದ್ದು ಪೋಲಿಸ್ ಕೆಲಸ ರಿಟೈಯರ್ಡ್ ಪೋಲಿಸ್ ಆಫೀಸರ್ ಕೆಂಪಯ್ಯ ಇಟ್ಟುಕೊಂಡು ಅಂಗಡಿ ಒಪನ್ ಮಾಡಿದ್ರಿ ಅವರನ್ನು ಮುಂದೆ ಇಟ್ಟುಕೊಂಡು ಏನೇನಲ್ಲಾ ಮಾಡಿಲ್ಲಾ? ನಿಮ್ಮ ಆಡಳಿತದಲ್ಲೆ ಪೋಲಿಸರು ಆತ್ಮಹತ್ಯೆ ಮಾಡಿಕೊಂಡರು ಈ ಕೂಡಲೇ ಪೋಲಿಸ್ ಇಲಾಖೆಗೆ ನೀವು ಕ್ಷಮೆ ಕೇಳಬೇಕು ಪೋಲಿಸ್ ಬಗ್ಗೆ ಮಾತಾಡಿದರಲ್ಲಾ ನೀವೂ ನಿಮಗೆ ನಾಚೀಕೆ ಆಗಬೇಕು ಹಗುರವಾಗಿ ಮಾತಾಡಿದ್ದೀರಾ ನೀವೂ. ಪೋಲಿಸ್ ಇಲಾಖೆ ನಿಮ್ಮ ವಿರುದ್ದ ತಿರುಗಿ ಬೀಳುತ್ತದೆ ಎಂದರು.

ಸಿದ್ದರಾಮಯ್ಯ ಆಟ, ಕಾಂಗ್ರೆಸ್ ಗೆ ಗೂಟ,ಸಿದ್ದರಾಮಯ್ಯ ಅವರನ್ನು ನಂಬಿಕೊಂಡವ ಕೆಟ್ಟ ಮಾತು ಮಾತಲ್ಲೂ ಸಿದ್ದರಾಮಯ್ಯವರ ಮೇಲೆ ಕೋಪ ಹೊರಹಾಕಿದ ಬಿಸಿ ಪಾಟೀಲ್ ಕಾಂಗ್ರೆಸ್ ನಿರ್ನಾಮ ಆಗುತ್ತದೆ. ಕಾಂಗ್ರೆಸ್ ಮುಕ್ತ ಹಿರೆಕೇರೂರು ಆಗುತ್ತದೆ. ಸ್ಪೀಕರ್ ನಾಲಾಯಕ್ ಅಂದರೆ ನೀವೂ ಲಾಯಕ್ ಸಿದ್ದರಾಮಯ್ಯನವರೆ. ಜಾರ್ಜ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸದರೆ ಸಿದ್ದರಾಮಯ್ಯರ ಹುಂಡಿ ಎಲ್ಲೇಲ್ಲಿದೆ ಅಂತಾ ಗೊತ್ತಾಗದೆ ಅವಾಗ ಯಾರು ನಾಲಾಯಕ್ ಅಂತಾ ಗೊತ್ತಾಗುತ್ತದೆ

ಖಂಡಿತಾ ಸಿದ್ದರಾಮಯ್ಯ ಮತ್ತು ದಿನೇಶ ಗುಂಡುರಾವ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ. ನಾನೇ ಸಿದ್ದರಾಮಯ್ಯನವರನ್ನ ನಂಬಿದ್ದೆ,ಆದರೆ ಅವರೇ ನನ್ನ ಎದೆಗೆ ಚೂರಿ ಹಾಕಿದ್ದು ಸಿದ್ದರಾಮಯ್ಯ  ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next