Advertisement

ರೈಲು ಹತ್ತುವಾಗ ಆಯತಪ್ಪಿ ಬಿದ್ದು ಬಿಬಿಎಂಪಿ ಅಧಿಕಾರಿ ದುರ್ಮರಣ

11:42 AM Dec 20, 2021 | Team Udayavani |

ಹುಬ್ಬಳ್ಳಿ: ನಗರದಲ್ಲಿ ರವಿವಾರ ರಾತ್ರಿ ರೈಲೊಂದನ್ನು ಇಳಿದು ಇನ್ನೊಂದು ರೈಲು ಹತ್ತುವಾಗ ಆಯತಪ್ಪಿ ಬಿದ್ದು ಬೆಂಗಳೂರು ಬಿಬಿಎಂಪಿ ಕೆಆರ್ ಐಡಿಎಲ್ ವಿಭಾಗದ ಅಧೀಕ್ಷಕ ಅಭಿಯಂತರ ರಂಗರಾಜು ಎಸ್ಎ (59) ಮೃತಪಟ್ಟಿದ್ದಾರೆ.

Advertisement

ರವಿವಾರ ರಾತ್ರಿ 11:30ರ ಸುಮಾರಿಗೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಹುಬ್ಬಳ್ಳಿ-ಬೆಂಗಳೂರು ರೈಲಿಗೆ ಹತ್ತುವ ಬದಲು ಬೆಳಗಾವಿ-ಬೆಂಗಳೂರು ರೈಲು ಹತ್ತಿದ್ದರು. ಅದು ಗೊತ್ತಾಗಿ ರೈಲು ಚಲಿಸುತ್ತಿರುವಾಗ ಇಳಿಯುವ ಸಂದರ್ಭದಲ್ಲಿ ಆಯತಪ್ಪಿ ಪ್ಲಾಟ್ ಫಾರ್ಂ ನಲ್ಲಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ರಂಗರಾಜು ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next