Advertisement

ಬಿಬಿಎಂಪಿ ಮೇಯರ್ ಫೈಟ್:  ನಾಮಪತ್ರ ಹಿಂಪಡೆದ ಬಿಜೆಪಿಯ ಪದ್ಮನಾಭ ರೆಡ್ಡಿ

09:59 AM Oct 02, 2019 | Team Udayavani |

ಬೆಂಗಳೂರು:  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ನಡೆಯುತ್ತಿದ್ದು, ಇಬ್ಬರು ಬಿಜೆಪಿ ಅಭ್ಯರ್ಥಿಗಳ ಪೈಕಿ ಪದ್ಮನಾಭ ರೆಡ್ಡಿ ತನ್ನ ನಾಮಪತ್ರ ಹಿಂಪಡೆದಿದ್ದಾರೆ.

Advertisement

ಕಾಂಗ್ರೆಸ್ ನ ಸತ್ಯನಾರಾಯಣ ಅವರು ಎರಡು ನಾಮಪತ್ರ ಸಲ್ಲಿಸಿದ್ದು, ಎರಡನ್ನೂ ಅಂಗೀಕರಿಸಿಲಾಗಿದೆ. ಬಿಜೆಪಿಯ ಗೌತಮ್ ಕುಮಾರ್ ಅವರು ಎರಡು ನಾಮಪತ್ರ ಸಲ್ಲಿಕೆ ಮಾಡಿದ್ದು, ಅವರೆಡು ಕ್ರಮಬದ್ಧವಾಗಿರುವ ಕಾರಣ ಅಂಗೀಕರಿಸಲಾಗಿದೆ. ಬಿಜೆಪಿಯ ಮತ್ತೊಬ್ಬ ಅಭ್ಯರ್ಥಿ ಪದ್ಮನಾಭ ರೆಡ್ಡಿ ಮೂರು ನಾಮಪತ್ರ ಸಮರ್ಪಕವಾಗಿತ್ತು. ಆದರೆ ನಂತರ ಪದ್ಮನಾಭ ರೆಡ್ಡಿಯವರು ನಾಮಪತ್ರ ಹಿಂಪಡೆದರು.

ಚುನಾವಣೆ ಬಹಿಷ್ಕಾರ: ಜೆಡಿಎಸ್ ನ ಮಂಜುಳಾ ನಾರಾಯಣ ಸ್ವಾಮಿ ಮತ್ತು ದೇವದಾಸ್ ಅವರು ಚುನಾವಣೆಯನ್ನು ಬಹಿಷ್ಕರಿಸಿ ಹೊರನಡೆದರು.

ಇಂದಿನ ಚುನಾವಣಾ ಪ್ರಕ್ರಿಯೆಯಲ್ಲಿ ಒಟ್ಟು 249 ಸದಸ್ಯರು ಭಾಗವಹಿಸಿದ್ದು, ನಂತರ ಇಬ್ಬರು ಜೆಡಿಎಸ್ ಸದಸ್ಯರು ಹೊರನಡೆದ ಕಾರಣ ಸಂಖ್ಯಾಬಲ 247ಕ್ಕೆ ಇಳಿಯಿತು.

ಬಿಬಿಎಂಪಿಯ ಕೌನ್ಸಿಲ್ ಕಟ್ಟಡದಲ್ಲಿ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಅವರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.

Advertisement

ಯಾವುದೇ ನಾಮಪತ್ರಗಳು ಬಾರದ ಕಾರಣ ನಾಲ್ಕು ಸ್ಥಾನಗಳಿಗೆ ನಡೆಯಬೇಕಿದ್ದ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಲಾಗಿದೆ ಎಂದು ಹರ್ಷ ಗುಪ್ತಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next