Advertisement

BBK11: ಮಹಿಳಾ ಸ್ಪರ್ಧಿಯ ಹೊಟ್ಟೆಗೆ ಏಟು; ಉಗ್ರಂ ಮಂಜುರನ್ನು ಆಚೆ ಕರೆಸಿ ಎಂದ ನೆಟ್ಟಿಗರು

06:59 PM Oct 24, 2024 | Team Udayavani |

ಬೆಂಗಳೂರು: ಬಿಗ್‌ಬಾಸ್‌ (Bigg Boss Kannada-11) ಮನೆ ರಾಜಕೀಯ ಅಖಾಡವಾಗಿ ಬದಲಾಗಿದೆ. ಸ್ಪರ್ಧಿಗಳು ಎರಡು ಪಕ್ಷದ ಕಾರ್ಯಕರ್ತರಾಗಿ ಬದಲಾಗಿದ್ದಾರೆ. ಇದೇ ವಿಚಾರದಲ್ಲಿ ದೊಡ್ಮನೆಯಲ್ಲಿ ಮತ್ತೆ ವಾಗ್ವಾದಗಳು ಶುರುವಾಗಿದೆ.

Advertisement

ಪ್ರಾಮಾಣಿಕ, ಸಮರ್ಥರ ನ್ಯಾಯವಾದಿ ಪಕ್ಷ ಹಾಗೂ ಧರ್ಮಪರ ಸೇನಾ ಪಕ್ಷ ಎಂದು ಎರಡು ಪಕ್ಷಗಳ ನಡುವೆ ಶುರುವಾದ ಕಿತ್ತಾಟದಲ್ಲಿ ಮಹಿಳಾ ಸ್ಪರ್ಧಿಯೊಬ್ಬರು ಕಣ್ಣೀರಿಟ್ಟಿದ್ದಾರೆ.

ಒಂದು ಪಕ್ಷದವರು ಪೋಸ್ಟರ್‌ ಬಾಗಿಲಿಗೆ ಅಂಟಿಸಿದ್ದರು ಈ ವೇಳೆ ಮಾನಸ ಅದನ್ನು ತೆಗೆಯಲು ಯತ್ನಿಸಿದ್ದಾರೆ. ಇದನ್ನು ನೋಡಿದ ಮಂಜು ಸಿಟ್ಟಿನಲ್ಲಿ ಮಾನಸ ಅವರನ್ನು ದೂಡಿ,ಯಾಕೆ, ಏನಕ್ಕೆ.. ಎನ್ನುತ್ತಾ ಗರಂ ಆಗಿದ್ದಾರೆ.

ಪೋಸ್ಟರ್‌ ಅಂಟಿಸುವ ಸಲುವಾಗಿ ಬಾಗಿಲು ಬಳಿ ನಿಂತಿದ್ದ ಮಾನಸ ಅವರ ಹತ್ತಿರ ಉಗ್ರಂ ಮಂಜು ಅವರು ಮಾತನಾಡುವ ಭರದಲ್ಲಿ ಮಾನಸ ಅವರನ್ನು ದೂಡಿದ್ದಾರೆ. ಇದರಿಂದ ಮಾನಸರ ಕಿಬ್ಬೊಟ್ಟೆಗೆ ಏಟಾಗಿದೆ. ಕೂಡಲೇ ನೋವಿನಲ್ಲಿ ಅತ್ತಿದ್ದಾರೆ. ಇದನ್ನು ನೋಡಿದ ಸಹ ಸ್ಪರ್ಧಿಗಳು ಮಾನವೀಯತೆ ಇಲ್ವಾ ಎಂದು ಪ್ರಶ್ನಿಸಿದ್ದಾರೆ. ಆದರೆ ಮಂಜು ನಾನು ಬೇಕಂಥ ಮಾಡಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.

Advertisement

ಮಂಜು ಮೇಲೆ ನೆಟ್ಟಿಗರು ಗರಂ; ಮನೆಯಿಂದ ಹೊರ ಹಾಕಿ ಎಂದ ಜನ.. : ಸದ್ಯ ಈ ಘಟನೆಯ ವಿಡಿಯೋ ವೈರಲ್‌ ಆಗಿದ್ದು, ಉಗ್ರಂ ಮಂಜು ಅವರ ವಿರುದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಜು ಅವರದ್ದು ಅತಿ ಆಯಿತು ಎಂದು ಕೆಲವರು ಹೇಳಿ, ಅವರನ್ನು ಹೊರಗೆ ಹಾಕಿ ಎಂದಿದ್ದಾರೆ.

ಇನ್ನು ಕೆಲವರು ಮಹಿಳೆಯರಿಗೆ ನಿಂದಿಸಿದ್ದಕ್ಕೆ ಜಗದೀಶ್‌ ಅವರನ್ನು ಹೊರಹಾಕಿದ್ದೀರಿ, ಇವರನ್ನು ಸಹ ಮನೆಯಿಂದ ಹೊರಗೆ ಹಾಕಿ ಎಂದು ಒತ್ತಾಯಿಸಿದ್ದಾರೆ. ಮಂಜು ಅವರ ಈ ವರ್ತನೆಗೆ ಕ್ರಮ ಆಗಬೇಕೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಕೆಲವರು ಮಾನಸರಿಗೆ ಹೊಟ್ಟೆಗೆ ತಾಗಿಲ್ಲ ಅವರು ನಾಟಕ ಮಾಡುತ್ತಿದ್ದಾರೆ ಎಂದು ಕಮೆಂಟ್‌ ಮಾಡಿದ್ದಾರೆ.

ಇನ್ನು ರಾಧಾ ಹಿರೇಗೌಡರು ಬಿಗ್‌ ಬಾಸ್‌ ಮನೆಗೆ ಅತಿಥಿಯಾಗಿ ಆಗಮಿಸಿದ್ದು, ಬಿಗ್‌ ಬಾಸ್‌ ರಾಜಕೀಯದಲ್ಲಿ ಕಿಂಗ್‌ ಮೇಕರ್‌ ಆಗಿ ಸ್ಪರ್ಧಿಗಳಿಗೆ ಖಡಕ್‌ ಆಗಿಯೇ ಪ್ರಶ್ನೆ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next