Advertisement

ಹಠಕ್ಕೆ ಬಿದ್ದು ಹೋರಾಟ: ಡಾ. ರವೀಂದ್ರ

07:29 AM Nov 17, 2017 | |

ಬೆಳಗಾವಿ: “ನಮ್ಮನ್ನು ಬೀದಿಗಿಳಿಸಿದವರಿಗೆ ಹಾಗೂ ಬೀದಿಗೆ ಇಳಿದವರಿಗೆ ಬಹಳ ಧನ್ಯವಾದಗಳು. ನಮ್ಮ ಹಕ್ಕನ್ನು ಪಡೆದುಕೊಳ್ಳಲು ನಾವು ಎಂತಹ ಹೋರಾಟಕ್ಕೂ ಸಿದ್ಧ. ಇದರಲ್ಲಿ ಅಳುಕಿನ ಮಾತೇ ಇಲ್ಲ ‘ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಎಚ್‌. ಎನ್‌. ರವೀಂದ್ರ ಹೇಳಿದರು. 

Advertisement

ತಾರೀಹಾಳ ರಸ್ತೆಯಲ್ಲಿ ನಿರ್ಮಿಸಲಾಗಿರುವ ಪ್ರತಿಭಟನಾ ವೇದಿಕೆಯಲ್ಲಿ ಗುರುವಾರ ವೈದ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಮ್ಮ ಆತ್ಮಗೌರವ ಕಾಪಾಡಿಕೊಳ್ಳಲು ಹಠಕ್ಕೆ ಬಿದ್ದು ಈ ಹೋರಾಟ ನಡೆಸಲಾಗುತ್ತಿದೆ. ಇದು ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದಕ್ಕೆ ಸಂಘಟನಾ ಶಕ್ತಿಯೇ ಕಾರಣ’ ಎಂದರು.

ಎಚ್‌ಡಿಕೆ ಅಭಯ: ಮುಷ್ಕರ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳ ವೈದ್ಯರನ್ನು ಗುರುವಾರ ಸಂಜೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಭೇಟಿ ಮಾಡಿ ಮುಷ್ಕರನಿರತ ವೈದ್ಯರಿಗೆ ಅಭಯ ನೀಡಿದರು.

ಖಾಸಗಿ ಆಸ್ಪತ್ರೆಗಳಿಗೆ ತೊಂದರೆಯಾಗುವ ಕೆಪಿಎಂಇ ಕಾಯ್ದೆ ಮಸೂದೆಯನ್ನು ಸರ್ಕಾರ ಮಂಡಿಸಿದ್ದೇ ಆದರೆ ಅದು ಅಂಗೀಕಾರವಾಗದಂತೆ ನೋಡಿಕೊಳ್ಳುತ್ತೇವೆ. ಕಾಂಗ್ರೆಸ್‌ನಲ್ಲೂ ಈ ಮಸೂದೆ ವಿರೋಧಿ ಸುವವರಿದ್ದಾರೆ. ಚರ್ಚೆಯಲ್ಲಿ ಜೆಡಿಎಸ್‌ ಕಡೆಯಿಂದ ಯಾರೂ ಪಾಲ್ಗೊಳ್ಳುವುದಿಲ್ಲ.
 ●ಕುಮಾರಸ್ವಾಮಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next