Advertisement

Basroor- ಕುಂದಾಪುರ ಹೆದ್ದಾರಿ ಬದಿ ಹುಲ್ಲು ಕಟಾವು

03:33 PM Oct 06, 2024 | Team Udayavani |

ಬಸ್ರೂರು: ಬಸ್ರೂರಿನಿಂದ ಕುಂದಾಪುರಕ್ಕೆ ಸಾಗುವ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಕಾಟುಗಿಡಗಳ ಕಟಾವು ಕಾರ್ಯ ಆರಂಭಗೊಂಡಿದೆ. ಎರಡೂ ಬದಿಯಲ್ಲಿ ಆಳೆತ್ತರಕ್ಕೆ ಹುಲ್ಲು, ಕಾಟು ಗಿಡಗಳು ಬೆಳೆದಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಗುತಿತ್ತು.

Advertisement

ಕುಂದಾಪುರದ ಬಸ್ರೂರು ಮೂರು ಕೈ ಬಳಿಯಿಂದ ಕೋಣಿ, ಸಟ್ವಾಡಿ, ಮೂಡ್ಲಕಟ್ಟೆ, ಬಸ್ರೂರುವರೆಗಿನ ರಸ್ತೆಯುದ್ದಕ್ಕೂ ಎರಡೂ ಬದಿಯಲ್ಲಿ ಹುಲ್ಲು,  ಗಿಡಗಳು ಬೆಳೆದಿದ್ದವು. ಇದರಿಂದ ವಾಹನ ಸವಾರರು ಮಾತ್ರವಲ್ಲದೆ, ಪಾದಚಾರಿಗಳಿಗೂ ಅಡಚಣೆಯಾಗಿತ್ತು. ಈ ಬಗ್ಗೆ ‘ಉದಯವಾಣಿ ಸುದಿನ’ವು ಸಚಿತ್ರ ಸಹಿತ ವರದಿ ಪ್ರಕಟಿಸಿ, ಗಮನಸೆಳೆಯುವ ಪ್ರಯತ್ನ ಮಾಡಿತ್ತು.

ಈಗ ಕಟಾವು ಕಾರ್ಯ ಮಾಡಿರುವುದರಿಂದ ವಾಹನ ಸವಾರರು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next