Advertisement

ಬಂಗಾಳದಲ್ಲಿ ಶಾಂತಿಗಾಗಿ ಪ್ರಾರ್ಥಿಸಿದ ಸಂಸದೆ ನುಸ್ರತ್‌ ಜಹಾನ್‌

09:12 AM Jun 10, 2019 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಘರ್ಷಣೆಗಳು ತೀವ್ರವಾಗುತ್ತಿರುವ ಬೆನ್ನಲ್ಲೇ ಬಸಿರ್‌ಹಾಟ್‌ನ ಟಿಎಂಸಿ ಸಂಸದೆ ನುಸ್ರತ್‌ ಜಹಾನ್‌ ಅವರು ಶಾಂತಿ ಕಾಪಾಡುಲು ಮನವಿ ಮಾಡಿದ್ದಾರೆ.

Advertisement

ಬಸೀರ್‌ಹಟ್‌ನಲ್ಲಿ ಶನಿವಾರ ನಡೆದ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವಿನ ಭಾರೀ ಘರ್ಷಣೆಯಲ್ಲಿ ಇಬ್ಬರು ಬಿಜೆಪಿ ಮತ್ತುಓರ್ವ ಟಿಎಂಸಿ ಕಾರ್ಯಕರ್ತ ಸಾವನ್ನಪ್ಪಿದ್ದರು. ಬಿಜೆಪಿ ತನ್ನ ಐವರು ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ ಎಂದು ಹೇಳಿಕೊಂಡಿದೆ.

ಘರ್ಷಣೆಯಲ್ಲಿ ಯಾರು ಸಾವನ್ನಪ್ಪಿದ್ದಾರೆ ಅವರ ಕುಟುಂಬ ಸದಸ್ಯರಿಗಾಗಿ ನಾನು ಪ್ರಾರ್ಥನೆ ಮಾಡುತ್ತೇನೆ.ನಾವಿಲ್ಲಿ ಶಾಂತಿ ಸ್ಥಾಪಿಸಬೇಕಾಗಿದೆ. ಇಲ್ಲಿ ಯಾವ ಧರ್ಮ , ಯಾವ ರಾಜಕೀಯ ಪಕ್ಷ ಎನ್ನುವ ವಿಚಾರ ಮುಖ್ಯವಲ್ಲ. ಶಾಂತಿಯನ್ನು ಕಾಪಾಡುವುದೇ ಮುಖ್ಯ ಎಂದು ನುಸ್ರತ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next