Advertisement

ಲೋಕಸಭೆ ಚುನಾವಣೆಗೆ ಬಸವರಾಜುಗೆ ಟಿಕೆಟ್‌?

06:15 AM Jun 04, 2018 | Team Udayavani |

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಂಸದ ಜಿ.ಎಸ್‌.ಬಸವರಾಜು
ಕಣಕ್ಕಿಳಿಯಲಿದ್ದಾರೆ ಎನ್ನುವ ಸುಳಿವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೀಡಿದ್ದಾರೆ.

Advertisement

ಹೀಗಾಗಿ, ಸೊಗಡು ಎಸ್‌.ಶಿವಣ್ಣ ಅವರಿಗೆ ಲೋಕ ಸಭಾ ಚುನಾವಣೆಯಲ್ಲಿಯೂ ಟಿಕೆಟ್‌ ತಪ್ಪುತ್ತದೆ ಎನ್ನಲಾಗುತ್ತಿದೆ. 

ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ, 2 ಬಾರಿ ಸಚಿವರಾಗಿ,ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಮಾಡಿದ್ದ ಮಾಜಿ ಸಚಿವ ಸೊಗಡು ಎಸ್‌.ಶಿವಣ್ಣ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಲಾಗಿತ್ತು. ಮುಂದೆಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಸಿಗುತ್ತದೆ ಎನ್ನುವ ನಿರೀಕ್ಷೆ ಇಟ್ಟಿದ್ದ ಅವರ ಅಭಿಮಾನಿಗಳಿಗೆ ಈಗ ಮತ್ತೆ ನಿರಾಸೆಯಾಗುವಂತೆ ಜಿ.ಎಸ್‌. ಬಸವರಾಜು ಅವರ ಹೆಸರನ್ನು ಮುಂದಿನ ಸಂಸದರೇ ಎಂದುಯಡಿಯೂರಪ್ಪ ಹೇಳುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಿ.ಎಸ್‌.ಬಸವರಾಜುಗೆ ಬಿಜೆಪಿ ಟಿಕೆಟ್‌ ಎನ್ನುವ ಸುಳಿವು ನೀಡಿದ್ದಾರೆ. ಯಡಿಯೂರಪ್ಪ ಅವರು ಭಾನುವಾರ ನಡೆಸಿದ ತಮ್ಮ ಪ್ರಚಾರ ಭಾಷಣದ ಆರಂಭದಲ್ಲಿಯೇ ಬಸವರಾಜುಗೆ ಮುಂದಿನ ಸಂಸದರೇ ಎಂದು ಸಂಭೋದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next