Advertisement

ಮತ್ತೆ ಹೊರಟ್ಟಿ ಸಭಾಪತಿ?

09:36 PM Dec 08, 2022 | Team Udayavani |

ಬೆಂಗಳೂರು: ರಾಜ್ಯ ವಿಧಾನಪರಿಷತ್‌ ಸಭಾಪತಿ ಸ್ಥಾನದ ಚುನಾವಣೆ ಡಿ.21ಕ್ಕೆ ನಿಗದಿಯಾಗಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿ.19ರಿಂದ 30 ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದ್ದು, ಅದೇ ಸಂದರ್ಭದಲ್ಲಿ ಸಭಾಪತಿ ಚುನಾವಣೆ ನಡೆಯಲಿದೆ.

Advertisement

ಬಸವರಾಜ ಹೊರಟ್ಟಿ ಮತ್ತೂಮ್ಮೆ ಸಭಾಪತಿ ಆಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ರಘುನಾಥ್‌ ರಾವ್‌ ಮಲ್ಕಾಪುರೆ ಅವರು ಈಗ ಹಂಗಾಮಿ ಸಭಾಪತಿಗಳಾಗಿದ್ದಾರೆ.

ಈ ಹಿಂದೆ ಜೆಡಿಎಸ್‌ನಲ್ಲಿದ್ದಾಗ ಬಸವರಾಜ ಹೊರಟ್ಟಿ  ಸಭಾಪತಿಯಾಗಿದ್ದರು. ಬಳಿಕ ಬಿಜೆಪಿಗೆ ಬಂದಿದ್ದಾರೆ. ಪರಿಷತ್‌ ಚುನಾವಣೆಯಲ್ಲೂ ಬಿಜೆಪಿಯಿಂದಲೇ ಸ್ಪರ್ಧಿಸಿ ಗೆದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next