Advertisement

ಸನ್ಮಾನದಿಂದ ಬಂದ ಬೆಳ್ಳಿಯ ಗದೆಯನ್ನು ಹನುಮ ದೇವರಿಗೆ ಅರ್ಪಿಸಿದ ಸಿಎಂ. ಬೊಮ್ಮಾಯಿ

01:58 PM Dec 26, 2021 | Team Udayavani |

ವಿಜಯಪುರ : ತಮಗೆ ವಿಜಯಪುರ ನಗರದ ಕಾರ್ಯಕ್ರಮದ ಸನ್ಮಾನದಲ್ಲಿ ಬಂದಿದ್ದ ಗದೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದ ಹನುಮ ದೇವರಿಗೆ ಅರ್ಪಿಸಿದ್ದಾರೆ.

Advertisement

ಶನಿವಾರ ನಗರದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಬೆಳ್ಳಿ ಗದೆ ನೀಡಿ ಸನ್ಮಾನಿಸಿದ್ದರು.

ತಮಗೆ ಸನ್ಮಾನದಲ್ಲಿ ಬಂದ ಬೆಳ್ಳಿಯ ಗದೆಯನ್ನು ತಾವು ಪಾಲಿಸಿಕೊಂಡು ಬಂದ ಸಂಪ್ರದಾಯದಂತೆ ಸದರಿ ಬೆಳ್ಳಿ ಗದೆಯನ್ನು ವಿಜಯಪುರ ಹನುಮದೇವರಿಗೆ ಅರ್ಪಿಸುವಂತೆ ವಿಜುಗೌಡರಿಗೆ ಮರಳಿ ನೀಡಿದರು.

ಕಾರ್ಯಕ್ರಮ ಮುಗಿಯುತ್ತಲೇ ಆಂಜನೇಯನ ವಾರವಾದ ಅದೇ ದಿನ ಸಂಜೆ ನಗರದ ಮದಲ ಮಾರುತಿ ದೇವಸ್ಥಾನಕ್ಕೆ ತೆರಳಿದ ವಿಜುಗೌಡ ಪಾಟೀಲ, ಮುಖ್ಯಮಂತ್ರಿ ಬೊಮ್ಮಾಯಿ ತಮಗೆ ಮರಳಿಸಿದ ಗದೆಯನ್ನು ಅರ್ಚಕರ ಮೂಲಕ ಹನುಮದೇವರಿಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ವೂಡಾ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ವಿಜಯ ಜೋಶಿ, ಶಾಸ್ವತಗೌಡ ಪಾಟೀಲ, ರಾಕೇಶ ಕುಲಕರ್ಣಿ, ವಿನಾಯಕ ದಹಿಂದೆ ಇತರರು ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ :  ದೇಹದಲ್ಲಿ ಕೆಮಿಕಲ್ ರಿಯಾಕ್ಷನ್ : ಮಂಗಳೂರಿನಲ್ಲಿ ವಿದ್ಯಾರ್ಥಿ ನೇಣಿಗೆ ಶರಣು

Advertisement

Udayavani is now on Telegram. Click here to join our channel and stay updated with the latest news.

Next