Advertisement

ತಮಿಳುನಾಡು ಸ್ವೇಚ್ಛಾಚಾರಕ್ಕೆ ಅವಕಾಶವಿಲ್ಲ

01:01 AM Feb 27, 2021 | Team Udayavani |

ಬೆಂಗಳೂರು: ತಮಿಳುನಾಡು ಸರಕಾರವು ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಯೋಜನೆಯೊಂ ದಕ್ಕೆ ಅಡಿಗಲ್ಲು ಹಾಕಿದ್ದು ಇದು ಅಂತಾರಾಜ್ಯ ಜಲ ವಿವಾದ ಕಾಯ್ದೆಗೆ ವಿರುದ್ಧವಾ ಗಿದೆ. ಕಾವೇರಿ ವಿಚಾರದಲ್ಲಿ ಸ್ವೇಚ್ಛಾಚಾರಕ್ಕೆ ತಮಿಳುನಾಡಿಗೆ ಅವಕಾಶ ಮಾಡಿಕೊಡೆವು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ಕಾನೂನು ತಜ್ಞರು ಹಾಗೂ ಜಲ ತಜ್ಞರ ಉನ್ನತ ಮಟ್ಟದ ಸಭೆ ನಡೆಸಲಾಗಿದೆ.

ತಮಿಳುನಾಡು ಸರಕಾರ ಅಡಿಗಲ್ಲು ಹಾಕಿರುವ ಕಾವೇರಿ-ವೈಗೈ-ಗುಂಡೂರು ನದಿ ಜೋಡಣೆ ಯೋಜನೆಯು ಅಂತಾರಾಜ್ಯ ಕಾನೂನಿಗೆ ವಿರುದ್ಧವಾಗಿದ್ದು, ಅದರ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ. ಸ್ವಾತಂತ್ರ್ಯ ಪೂರ್ವದಿಂದಲೂ ರಾಜ್ಯದ ನೀರಾವರಿ ಯೋಜನೆಗಳಿಗೆ ತಮಿಳುನಾಡು ವಿರೋಧ ಮಾಡುತ್ತ ಬಂದಿದೆ. ಅಂತಿಮ ನಿರ್ಧಾರ ಆಗುವ ವರೆಗೆ ಹೆಚ್ಚುವರಿ ನೀರು ಬಳಕೆಗೆ ಅವಕಾಶ ನೀಡದಂತೆ ನಮ್ಮ ವಾದ ಮಂಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಕೇಂದ್ರ ಆರ್ಥಿಕ ನೆರವು ನೀಡಿಲ್ಲ :

ಕಾವೇರಿಯ ಹೆಚ್ಚುವರಿ ನೀರು ಬಳಕೆ ಮಾಡಿಕೊಳ್ಳುವ ತಮಿಳುನಾಡು ಸರಕಾರದ ಉದ್ದೇಶಿತ ಯೋಜನೆಗೆ  ಕೇಂದ್ರ ಸರಕಾರ ಆರ್ಥಿಕ ನೆರವು ನೀಡಿದೆ ಎಂಬುದು ಆಧಾರರಹಿತ ಆರೋಪ. ಇಂತಹ ಊಹಾಪೋಹಗಳಿಗೆ ಯಾರೂ ಕಿವಿಗೊಡಬಾರದು ಎಂದರು.

Advertisement

ಕಾನೂನು ಹೋರಾಟಕ್ಕೆ  ದಿಲ್ಲಿ  ಟೀಂ :

ಅಂತಾರಾಜ್ಯ ಜಲ ವಿವಾದಗಳು ಸೇರಿದಂತೆ ನ್ಯಾಯಾಧೀಕರಣ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ದಾವೆಗಳಲ್ಲಿ ಕಾನೂನು ಹೋರಾಟ ನಡೆಸುವ ಜವಾಬ್ದಾರಿಯನ್ನು ದಿಲ್ಲಿ ವಕೀಲರ ತಂಡದ ಹೆಗಲಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

ಶುಕ್ರವಾರದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದ್ದು, 2018ಕ್ಕಿಂತ ಮುಂಚೆ ಇದ್ದ ಕಾನೂನು ಹೋರಾಟದ ವ್ಯವಸ್ಥೆಯನ್ನು ಮುಂದುವರಿಸಲಾಗುವುದು. 2018ಕ್ಕಿಂತ ಮುಂಚೆ ದಿಲ್ಲಿ ವಕೀಲರ ತಂಡ ಕಾನೂನು ಹೋರಾಟದ ಮುಂದಾಳತ್ವ ವಹಿಸುತ್ತಿತ್ತು. 2018ರ ಅನಂತರ ಬೆಂಗಳೂರು ವಕೀಲರ ತಂಡಕ್ಕೆ ವಹಿಸಲಾಗಿತ್ತು. ಇದೀಗ ಕಾವೇರಿ-ಮಹದಾಯಿ ಸೇರಿದಂತೆ ರಾಜ್ಯದ ಜಲ ವಿವಾದಗಳಲ್ಲಿ ನ್ಯಾಯಾಧೀಕರಣ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಸರಕಾರವನ್ನು ಪ್ರತಿನಿಧಿಸುತ್ತಿದ್ದ ದಿಲ್ಲಿ ವಕೀಲರ ತಂಡ, ಮುಂದಿನ ಕಾನೂನು ಹೋರಾಟದ ನೇತೃತ್ವದ ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next