Advertisement

ಬಸವಪ್ರಭು ಸ್ವಾಮೀಜಿಗೆ ಮುರುಘಾ ಮಠದ ಪೂಜಾ ಕೈಂಕರ್ಯಗಳ ಉಸ್ತುವಾರಿ: ಅಧಿಕೃತ ಆದೇಶ

01:42 PM Oct 16, 2022 | Team Udayavani |

ಚಿತ್ರದುರ್ಗ: ಶ್ರೀ ಮುರುಘಾರಾಜೇಂದ್ರ ಬೃಹನ್ಮಠದ ಪೂಜಾ, ಸೇವಾ, ಧಾರ್ಮಿಕ ಕೈಂಕರ್ಯ ನಡೆಸಿಕೊಂಡು ಹೋಗಲು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅವರನ್ನು ಸದ್ಯದ ಪರಿಸ್ಥಿತಿಗೆ ನೇಮಕ ಮಾಡಿ ಪೀಠಾಧ್ಯಕ್ಷರಾದ ಶ್ರೀ ಶಿವಮೂರ್ತಿ ಮುರುಘಾ ಶರಣರು ನೇಮಕ ಮಾಡಿದ್ದಾರೆ.

Advertisement

ಹೈಕೋರ್ಟ್ ಆದೇಶದಂತೆ ಸದ್ಯದ ಪರಿಸ್ಥಿತಿಯಲ್ಲಿ ಶ್ರೀ ಮಠದ ಪರಂಪರೆಯಂತೆ ದೈನಂದಿನ ಕೈಂಕರ್ಯಗಳನ್ನು ತಮ್ಮ ಅನುಪಸ್ಥಿತಿಯಲ್ಲಿ, ಭಕ್ತರ ಆಶಯದಂತೆ ಮುಂದುವರೆಸಿಕೊಂಡು ಹೋಗಲು ಅ.15ರಂದು ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳಿಗೆ ಪತ್ರ ನೀಡಿದ್ದಾರೆ.

ಇದನ್ನೂ ಓದಿ:ಟ್ಯಾಕ್ಸ್ ಏಜೆಂಟ್ ನನ್ನು ಕಿಡ್ನಾಪ್ ಮಾಡಿದ ಪೊಲೀಸರು 1.5 ಲಕ್ಷ ಸುಲಿಗೆ ಮಾಡಿದರು!

ಶ್ರೀಗಳ ಆದೇಶದಂತೆ ಬಸವಪ್ರಭು ಸ್ವಾಮೀಜಿ ಇಂದಿನಿಂದ ಸೇವಾ ಕಾರ್ಯಗಳನ್ನು ಮಾಡಲು ಕಾರ್ಯೋನ್ಮುಖರಾಗಿರುತ್ತಾರೆ. ಶ್ರೀಮಠದ ಸರ್ವ ಭಕ್ತರು ಎಂದಿನಂತೆ ಸಹಕರಿಸಲು ಶ್ರೀಮಠದ ವತಿಯಿಂದ ಕೋರಿದ್ದಾರೆ.

ಈ ಕುರಿತು ಮಠದ ವಕೀಲರಾದ ಉಮೇಶ್, ವಿಶ್ವನಾಥ್, ಮಠದ ಭಕ್ತರಾದ ಜಿತೇಂದ್ರ ಹುಲಿಕುಂಟೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next