Advertisement

ಕೋವಿಡ್-19: ಸಿ.ಎಂ ಪರಿಹಾರ ನಿಧಿಗೆ 3 ತಿಂಗಳ ವೇತನ ನೀಡಿದ ಶಾಸಕ ಯತ್ನಾಳ

11:14 AM Mar 27, 2020 | keerthan |

ವಿಜಯಪುರ: ಕೇಂದ್ರದ ಆದೇಶದಂತೆ ರಾಜ್ಯ ಸರ್ಕಾರ ಕೋವಿಡ್-19 ಸೋಂಕು ನಿಗ್ರಹಕ್ಕೆ ಮಾಡಿರುವ ಲಾಕಡೌನ್ ನಿಂದ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಇದರಿಂದಾಗಿ ಸರ್ಕಾರಕ್ಜೆ ನೆರವಾಗಲು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ಮೂರು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

Advertisement

ಈ ಕುರಿತು ಗುರುವಾರ ಮುಖ್ಯಮಂತ್ರಿಗಳಿಗೆ‌ ಪತ್ರ  ಬರೆದಿರುವ ಯತ್ನಾಳ, ದೇಶಾದ್ಯಂತ ಹಾವಳಿ ಸೃಷ್ಟಿಸಿರುವ ಕೊವಿಡ್-19 ಹಾವಳಿ‌ ಮಿತಿ‌ಮೀರಿ ಹರಡದಂತೆ ತಡೆಯಲು ಲಾಕ್ ಡೌನ್ ಹೇರಲಾಗಿದೆ. ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ದಿಟ್ಟ ನಿರ್ಧಾರಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಅವರು, ಆರ್ಥಿಕ ಬೆಂಬಲದ ಮೂಲಕ ನೈತಿಕ ಬೆಂಬಲ ನೀಡುವುದು ನಮ್ಮ ಹೊಣೆ ಎಂದಿದ್ದಾರೆ.

ಇದಕ್ಕಾಗಿ ಶಾಸಕರಿಗೆ ಸರ್ಕಾರ ನೀಡುವ ಮಾಸಿಕ ವೇತನದ ಮೂರು ತಿಂಗಳ ವೇತನವನ್ನು ಮುಖ್ಯಮಂತ್ರಿ ನಿಧಿಗೆ ಪಡೆಯುವಂತೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next