Advertisement
ನಗರದ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಾ| ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ನಡೆದ 42ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಡಿಜಿಟಲ್ ತಂತ್ರಜ್ಞಾನಕ್ಕೆ ಭಾರತದ ಕೊಡುಗೆ’ ಕುರಿತು ಅವರು ಉಪನ್ಯಾಸ ನೀಡಿದರು.
Related Articles
Advertisement
ಅಮೆರಿಕಾ ಶಿಕ್ಷಣ ಪದ್ಧತಿಯಲ್ಲಿ ಪ್ರಶ್ನಿಸುವ ವಿಧಾನ ಮತ್ತು ಪ್ರವೃತ್ತಿ ಇರುವುದರಿಂದಲೇ ಹಲವು ಅನ್ವೇಷಣೆಗಳು ಅಲ್ಲಿ ಸಾಧ್ಯವಾಗಿದೆ. ಅನ್ವೇಷಕ ಗುಣದಿಂದ ಮಾತ್ರ ಇಂಜಿನಿಯರ್ಗಳು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬಹುದು. ಎಣಿಕೆ, ಗಣನೆ ವಿಧಾನವನ್ನು ಭಾರತೀಯರು ಶೋಧಿಸಿದ್ದಾರೆ.
ಆರ್ಯಭಟ, ಭಾಸ್ಕಾರಾಚಾರ್ಯ, ಬ್ರಹ್ಮಗುಪ್ತ ಎಣಿಕೆ ಕ್ರಮ ಬಳಸಿದರು. ಅರಬ್ಬಿಕರು ಭಾರತೀಯರಿಂದ ಈ ಪದ್ಧತಿ ಅಳವಡಿಸಿಕೊಂಡರು. ನೀಲಕಂಠ ಸೋಮಯಾಜಿ, ಮಾಧವ ಮೊದಲಾದವರು ನ್ಯೂಟನ್ಗಿಂತ ಮುಂಚೆಯೆ ಅನಂತತೆ (ಇನಿಫಿನಿಟಿ) ಪರಿಕಲ್ಪನೆಯನ್ನು ತಮ್ಮ ಕೃತಿಯಲ್ಲಿ ಕೊಟ್ಟಿದ್ದಾರೆ. ನ್ಯೂಟನ್ ಹೇಳುವ ಕ್ಯಾಲ್ಕಲಸ್ ಮೊದಲಾದವು ಭಾರತದಲ್ಲಿ ಮೊದಲೆ ಅಸ್ತಿತ್ವದಲ್ಲಿದ್ದವು. ಎಂಪಿ3 ಎನ್.ಜಯಂತ್ ಎಂಬ ಕನ್ನಡಿಗನ ನೇತೃತ್ವದಲ್ಲಿ ಬಂದಿದೆ. ಎಚ್ಡಿ ಟಿವಿ ಅರುಣ ನೇತ್ರಾವಳಿ ಎಂಬ ಕನ್ನಡಿಗನ ಶೋಧವಾಗಿದೆ. ಫೈಬರ್ ಆಪ್ಟಿಕ್ಸ್ ನರೇಂದ್ರಸಿಂಗ್ ಕಪಾನಿ ಎಂಬ ಭಾರತೀಯ ವಿಜ್ಞಾನಿ ಅನ್ವೇಷಿಸಿ ಇಂಥ ಪರಿಭಾಷೆ ರೂಢಿಗೆ ತಂದರು.
ಜಾಗತಿಕ ವಿಜ್ಞಾನ ತಂತ್ರಜ್ಞಾನದ ಲೋಕದಲ್ಲಿ ಹಾರ್ಡವೇರ್ ಮತ್ತು ಸಾಫ್ಟ್ವೇರ್ ಕ್ಷೆತ್ರಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದೆ. ಆಧಾರ್, ಬ್ಯಾಂಕ್ ಖಾತೆ, ರೈಲ್ವೆ ಟೀಕೆಟ್ ನಿಗದಿ, ಭೂ ದಾಖಲೆ, ಆಸ್ತಿ ವಿವರ ಹೀಗೆ ಎಲ್ಲವೂ ಭಾರತದ ಅತಿ ದೊಡ್ಡ ಡಿಜಿಟಲ್ ಯೋಜನೆಯ ವ್ಯಾಪ್ತಿಗೆ ಬಂದಿವೆ. ತಂತ್ರಜ್ಞಾನವನ್ನು ಗುಣಾತ್ಮಕ ಚಟುವಟಿಗಳಿಗೆ ಬಳಸುವ ಅಗತ್ಯವಿದೆ. ಈ ಕಾಲದಲ್ಲಿ ಪ್ರಧಾನ ದತ್ತಾಂಶಗಳು, ಕೃತಿಗಳು, ಸಂಶೊಧನ ಬರಹಗಳು ಡಿಜಿಟಲಿಕರಣಗೊಂಡಿವೆ ಎಂದರು.
ಪ್ರತಿಷ್ಠಾನ ನಿರ್ದೇಶಕ ಡಾ| ಭೀಮಾಶಂಕರ ಬಿರಾದಾರ ಮಾತನಾಡಿ, ಸದ್ಯದ ಸಮಾಜದ, ಜನಸಮೂಹದ ಬದುಕಿನ ಕ್ರಮ ಡಿಜಿಟಲ್ ತಂತ್ರಜ್ಞಾನದ ಮೇಲೆಯೇ ನಿಂತಿದೆ. ಈ ಕಾಲದ ವೈದ್ಯಕೀಯ, ಸಿನಿಮಾ, ಕೃಷಿ, ಶಿಕ್ಷಣ, ಆರ್ಥಿಕ ಮತ್ತು ರಾಜಕೀಯ ವಲಯಗಳು ಡಿಜಿಟಲ್ ತಂತ್ರಜ್ಞಾನದ ಪರಿಪ್ರೇಕ್ಷೆಯಲ್ಲಿವೆ. ಜಾಗತಿಕ ಮಟ್ಟದಲ್ಲಿ ಮತ್ತು ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿದಿನ ಹೊಸ ಹೊಸ ಸಮಶೋಧನೆ ಮತ್ತು ಆವಿಷ್ಕಾರಗಳು ನಿರಂತರ ನಡೆಯುತ್ತವೆ. ಬಿಕೆಇಸಿ ಪ್ರಭಾರಿ ಪ್ರಾಚಾರ್ಯ ಡಾ| ಅರುಣ್ಕುಮಾರ ಯಲಾಲ್ ಅಧ್ಯಕ್ಷತೆ ವಹಿಸಿದ್ದರು.
ಧಾರವಾಡ ಕೃಷಿ ವಿವಿ ನಿವೃತ್ತ ಪ್ರಾಧ್ಯಾಪಕ, ಕೃಷಿ ವಿಜ್ಞಾನಿ ಪ್ರೊ| ವಿಜಯಕುಮಾರ ಗಿಡ್ನವರ್, ಜಯಶ್ರೀ ಗಿಡ್ನವರ್, ವೀರೇಶ ಮಠಪತಿ, ರಮೇಶ ಭೊಸ್ಲೆ, ಸ್ವರ್ಣಲತಾ ಹಿರೇಮಠ ಸೇರಿದಂತೆ ಮತ್ತಿತರರು ಇದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ಸ್ವಾಗತಿಸಿದರು. ಸಂಜುಕುಮಾರ ಜಲ್ದೆ ನಿರೂಪಿಸಿದರು. ಡಾ| ಶಿವಾಜಿ ಮೇತ್ರೆ ವಂದಿಸಿದರು.