Advertisement

ಬಸವಾದಿ ಶರಣರ ತತ್ವಾದರ್ಶ ಪಾಲಿಸಿ

10:22 AM Feb 03, 2019 | |

ವಿಜಯಪುರ: ಸಮಾಜದಲ್ಲಿನ ಅಸಮಾನತೆ, ಮೂಢನಂಬಿಕೆಗಳನ್ನು ಹೋಗಲಾಡಿಸಲು ಹಲವಾರು ವಚನಕಾರರು, ಬುದ್ಧಿಜೀವಿಗಳು ತಮ್ಮ ಸಾಹಿತ್ಯದ ಮೂಲಕ ಹೋರಾಡಿದ್ದಾರೆ ಎಂದು ವಿಜಯಪುರ ನಗರ ಶಾಸಕರಾದ ಬಸನಗೌಡ ಆರ್‌, ಪಾಟೀಲ ಯತ್ನಾಳ ಅವರು ಹೇಳಿದರು.

Advertisement

ನಗರದ ಕಂದಗಲ್‌ ಹನುಮಂತರಾಯ ಜಿಲ್ಲಾ ರಂಗಮಂದಿರ ಆವರಣದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಮಾಚಿದೇವ ಶರಣರು ದೂರ ದೃಷ್ಠಿಉಳ್ಳವರಾಗಿದ್ದರು. ಅವರ ವಚನ ಸಾಹಿತ್ಯದ ಕೊಡುಗೆ ಅಪಾರವಾದುದು. ನಮ್ಮ ದೇಶದಲ್ಲಿ ಸಮಾನತೆ ಮೂಢನಂಬಿಕೆಗಳಂತಹ ಅನೇಕ ಜ್ವ್ವಲಂತ ಸಮಸ್ಯೆಗಳನ್ನು ಹೋಗಲಾಡಿಸಲು ಇಂತಹ ಹಲವಾರು ಮಹನೀಯರು ತಮ್ಮ ಸಾಹಿತ್ಯದ ಮೂಲಕ ಹೋರಾಡಿದ್ದಾರೆ, ಅವರ ಸಿದ್ಧಾಂತ ಅನ್ವಯ ಸುಭದ್ರ ದೇಶ ಕಟ್ಟುವಂತ ಪ್ರಯತ್ನ ನಡೆಯಬೇಕು ಎಂದು ಹೇಳಿದರು.

ಪ್ರಸಕ್ತ ಅಧುನಿಕರಣದಲ್ಲಿ ಯುವಕರಿಗಾಗಿಯೆ ಕೌಶಲ್ಯಾಭಿವೃದ್ಧಿ ಸ್ವ ಉದ್ಯೋಗಗಳಂತಹ ಉತ್ತಮ ಯೋಜನೆಗಳನ್ನು ರೂಪಿಸಿ ನಿರುದ್ಯೋಗ ಹೋಗಲಾಡಿಸಲು ಸರ್ಕಾರ ಸನ್ನದ್ಧœವಾಗಿದೆ. ಹಾಗಾಗಿ ಯುವಕರು ಅನವಶ್ಯವಾಗಿ ಕಾಲಹರಣ ಮಾಡುವ ಬದಲು ಉತ್ತಮ ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಾಗಠಾಣ ಶಾಸಕ ಡಾ| ದೇವಾನಂದ ಚವ್ಹಾಣ ಮಾತನಾಡಿ, ದಾರ್ಶನಿಕರ ಜನಪರ‌ ತತ್ವಗಳನ್ನು ನಾವು ಪಾಲಿಸಬೇಕಾಗಿದೆ. ಮಾಚಿದೇವ ಮಡಿವಾಳರು ಸೇರಿದಂತೆ ಹಲವಾರು ಮಹನೀಯರು ಜಾತಿಪದ್ಧತಿ, ಮೂಢನಂಬಿಕೆ ವಿರುದ್ಧ ತಮ್ಮ ವಚನ ಸಾಹಿತ್ಯದ ಮೂಲಕ ಹೋರಾಡಿದ್ದಾರೆ. ಇಂತಹ ಮಹನೀಯ ತತ್ವ, ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

Advertisement

ಉಪನ್ಯಾಸ ನೀಡಿದ ಪ್ರೊ| ಮಹಾದೇವ ರೆಬಿನಾಳ ಮಾತನಾಡಿ, ಬಸವಣ್ಣನವರ ಕ್ರಾಂತಿ ಸಂದರ್ಭದಲ್ಲಿ ಅವರಿಗೆ ಹೆಗಲಾಗಿ ನಿಂತವರಲ್ಲಿ ಮಾಚಿದೇವ ಶರಣರು ಕೂಡ ಒಬ್ಬರು. ಆಗಿನ ಅನುಭವ ಮಂಟಪ ಈಗಿನ ವಿಧಾನಸೌಧದಂತೆ ಕಾರ್ಯ ನಿರ್ವಹಿಸುತ್ತಿತ್ತು. ಅದರ ಸಕಲ ಜವಾಬ್ದಾರಿ ಮಾಚಿದೇವರು ವಹಿಸಿದ್ದರು ಎಂದು ಹೇಳಿದರು.

ಮಾಚಿದೇವ ಮಡಿವಾಳರ ಸಾವಿರಾರು ವಚನ ಸಾಹಿತ್ಯಗಳಲ್ಲಿ ಲಭ್ಯ ಇರುವುದು ಕೇವಲ 350 ವಚನಗಳು ಮಾತ್ರ. ಮೂಢನಂಬಿಕೆ ತೊಡೆದು ಹಾಕುವಲ್ಲಿ ಇವರ ಪಾತ್ರ ಅಪಾರವಾಗಿದೆ. ಬರಿಗೈಯಲ್ಲಿ ಇಡಿ ದೇಶವನ್ನೇ ಗೆಲ್ಲಬಹುದು ಎಂಬುದಕ್ಕೆ ಮಾಚಿದೇವರೆ ಉತ್ತಮ ಉದಾಹರಣೆ ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ವಿ.ಸಿ.ನಾಗಠಾಣ, ಶಿವು ಹುಬ್ಬಳ್ಳಿ, ಸಾಯಬಣ್ಣ ಮಡಿವಾಳರ, ಭಾರತಿ ಟಂಕಸಾಲಿ, ಶರಣಪ್ಪ ಕನ್ನೊಳ್ಳಿ ಸೇರಿದಂತೆ ಸಮಾಜದ ಮುಖಂಡರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎಚ್.ಬಿ. ವಿದ್ಯಾವತಿ ಸ್ವಾಗತಿಸಿದರು. ಶ್ರೀದೇವಿ ಭಂಡಾರಕರ ವಚನ ಗಾಯನ ನಡೆಸಿಕೊಟ್ಟರು. ಶಿಕ್ಷಕ ಹುಮಾಯೂನ ಮಮದಾಪುರ ನಿರೂಪಿಸಿದರು.

ಇದಕ್ಕೂ ಮೊದಲು ನಗರದ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮಡಿವಾಳ ಮಾಚಿದೇವ ಶರಣರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ ಚಾಲನೆ ನೀಡಿದರು. ಮೆರವಣಿಗೆ ಮಹಾತ್ಮ ಗಾಂಧಿಧೀಜಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ ಮಾರ್ಗವಾಗಿ ರಂಗಮಂದಿರ ತಲುಪಿತು.

Advertisement

Udayavani is now on Telegram. Click here to join our channel and stay updated with the latest news.

Next