Advertisement

ಸಮ ಸಮಾಜಕ್ಕೆ ಶ್ರಮಿಸಿದ ಮಾನವತಾವಾದಿ ಬಸವಣ್ಣ

02:19 PM May 04, 2022 | Team Udayavani |

ಚಾಮರಾಜನಗರ: ಸಾಮಾಜಿಕ ತಾರತಮ್ಯ, ಜಾತೀಯತೆ ಹೋಗಲಾಡಿಸಿ, ಸಮ ಸಮಾಜ ನಿರ್ಮಾಣದ ಮೂಲಕ ಇಡೀ ಮನುಕುಲದ ಶ್ರೇಯಸ್ಸಿಗೆ ದುಡಿದ ಮಹಾನ್‌ ಮಾನವತಾ ವಾದಿ ಬಸವಣ್ಣನವರು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು.

Advertisement

ಮಂಗಳವಾರ, ನಗರದ ಪೇಟೆ ಪ್ರçಮರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾನ್‌ ಮಾನವತಾವಾದಿ, ಸಮಾಜ ಸುಧಾರಕರಾದ ಜಗ ಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾಯಕವೇ ಕೈಲಾಸದಡಿ ಪ್ರತಿಯೊಬ್ಬರು ತಾವು ಮಾಡುವ ಕೆಲಸ-ಕಾರ್ಯದಲ್ಲಿ ದೇವ ರನ್ನು ಕಾಣ ಬೇಕೆಂದ ಬಸವಣ್ಣನವರ ಆದರ್ಶ ತತ್ವ ಸಿದ್ಧಾಂತ ಗಳನ್ನು ದಿನನಿತ್ಯದ ಕಾಯಕದಲ್ಲಿ ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ. ನುಡಿ ದಂತೆ ನಡೆದ ಬಸವಣ್ಣನವರ ಕಾಲದಲ್ಲಿ ಹೇಳು ವವರು, ಕೇಳು ವವರು ಇಬ್ಬರೂ ಪ್ರಾಮಾ ಣಿಕರಾಗಿದ್ದರು. ಪರಿಸ್ಥಿತಿ ಬದಲಾಗಿರುವುದು ಈಗಿನ ದುರಂತವಾಗಿದೆ ಎಂದರು.

ಕಾರ್ಯ ಕ್ರಮದಲ್ಲಿ ವಸತಿ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ನೀಡಿರುವ ಸಂದೇಶವನ್ನು ವಾಚನ ಮಾಡಲಾಯಿತು. ಕನ್ನಡನಾಡಿನ ಮಹಾನ್‌ ಕ್ರಾಂತಿಯ ಮೂಲ ಪುರುಷ ಬಸವಣ್ಣ ಕರ್ನಾಟಕದ ಪುಣ್ಯಭೂಮಿ ಕಂಡ ಶ್ರೇಷ್ಠ ಮಾನವತಾವಾದಿ. ಎಲ್ಲರನ್ನೊಳ ಗೊಳ್ಳುವ ಮಾನವ ತತ್ವವವನ್ನು ಅನುಸರಿಸುವ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಯುಗಪುರುಷ. ಸುಮಾರು 800 ವರ್ಷಗಳ ಹಿಂದೆಯೇ ಸಮ ಸಮಾಜವನ್ನು ನಿರ್ಮಿಸುವ ಪಣತೊಟ್ಟು ಕ್ರಾಂತಿ ಮೊಳಗಿಸಿದ ಬಸವಣ್ಣನವರ ದಾರ್ಶನಿಕತ್ವದ ಅಡಿಪಾಯವೇ ಕಾಯಕತತ್ವ ಆಗಿದೆ. ಕಾಯಕವೇ ಕೈಲಾಸ ಎಂದು ಹೇಳುವ ಮೂಲಕ ಕಾಯಕಕ್ಕೆ ಕೈಲಾಸದ ಪಟ್ಟಕಟ್ಟಿ ಅದ ಕ್ಕೊಂದು ದೈವಿಕ ಸ್ಪರ್ಶ ನೀಡಿದವರು ವಿಶ್ವಗುರು ಬಸವಣ್ಣ ಎಂದು ಉಸ್ತುವಾರಿ ಸಚಿವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ನಗರಸಭಾ ಅಧ್ಯಕ್ಷೆ ಆಶಾನಟರಾಜು, ನಗರದ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠ ಧ್ಯಾಕ್ಷರಾದ ಚನ್ನಬಸವಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ಬಸವತತ್ವ ಪ್ರಚಾರಕ ಎಲ್‌. ಬಸಪ್ಪ ಬೊಮ್ಮಲಾ ಪುರ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌. ಸುಂದ ರರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚನ್ನಪ್ಪ ಇತರರು ಕಾರ್ಯಕ್ರಮದಲ್ಲಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next