Advertisement

Vijayapura: ಸದನದ ಹೋರಾಟದಲ್ಲಿ ಜೋಡೆತ್ತು ವಿಫಲ: ಯತ್ನಾಳ

07:02 PM Dec 16, 2023 | Team Udayavani |

ವಿಜಯಪುರ: ಬೆಳಗಾವಿ ಅಧಿವೇಶನದಲ್ಲಿ ವಿಪಕ್ಷದ ನಾಯಕರಾಗಿ ಜೋಡೆತ್ತುಗಳು ಸಮರ್ಥವಾಗಿ ಹೋರಾಟ ಮಾಡುವಲ್ಲಿ ವಿಫಲವಾಗಿದ್ದರಿಂದ ನಾನು ಧ್ವನಿ ಎತ್ತಿದ್ದೆ. ಖಂಡನೆಯ ಹೇಳಿಕೆಗೆ ಸೀಮಿತವಾದ ವರ್ತನೆಯಿಂದ ಹೈಕಮಾಂಡ್‍ನಿಂದ ಜೋಡೆತ್ತಿಗೆ ಕರೆ ಬಂದಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಶಿವಕುಮಾರ ವಿರುದ್ಧದ ಸಿಬಿಐ ತನಿಖೆ ಪ್ರಕರಣ ಹಿಂಪಡೆದ ಸರ್ಕಾರದ ವರ್ತನೆ ಹಾಗೂ ಬೆಳಗಾವಿಯ ಬೆತ್ತಲೆ ಪ್ರಕರಣದ ಕುರಿತು ಸದನದಲ್ಲಿ ಸರಿಯಾದ ರೀತಿಯಲ್ಲಿ ಹೋರಾಟ ಮಾಡುವಂತೆ ಆದೇಶವಿತ್ತು. ಆದರೂ ನಮ್ಮ ಪಕ್ಷದ ಜೋಡೆತ್ತುಗಳು ಖಂಡನೆ ಹೇಳಿಕೆಗೆ ಸೀಮಿತವಾದವು ಎಂದು ವಿಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.

ಉತ್ತರ ಪ್ರದೇಶದ ದಲಿತ ಮಹಿಳೆ ಮೇಲಿನ ಅಮಾನುಷ ಕೃತ್ಯದಂತೆಯೇ ಬೆಳಗಾವಿಯಲ್ಲೂ ಮಹಿಳೆಯ ಬೆತ್ತಲೆ ಪ್ರಕರಣ ಅತ್ಯಂತ ಅಮಾನವೀಯ ಹಾಗೂ ಘೋರ ಕೃತ್ಯ. ಇಂಥ ಗಂಭೀರ ವಿಷಯದಲ್ಲಿ ವಿಪಕ್ಷವಾಗಿ ಸದನದಲ್ಲಿ ಸರ್ಕಾರದ ವಿರುದ್ಧ ಹೋರಾಡುವಲ್ಲಿ ರಾಜ್ಯದ ನಾಯಕರು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಕಿಡಿ ಕಾರಿದರು.

ವಿಪಕ್ಷದ ನಾಯಕರ ಹೊರತಾಗಿಯೂ ಬಿಜೆಪಿ, ಜೆಡಿಎಸ್ ಶಾಸಕರು ಸದನದಲ್ಲಿ ನಮ್ಮಿಂದ ಸಾಧ್ಯವಾದಷ್ಟು ಪ್ರಮಾಣಿಕರವಾಗಿ ಹೋರಾಟ ಮಾಡಿದ್ದೇವೆ. ನಮ್ಮ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ಧೇವೆ ಎಂದರು.

ವಿಪಕ್ಷ ನಾಯಕ-ಬಿಜೆಪಿ ರಾಜ್ಯಾಧ್ಯಕ್ಷ ಅವರಿಗಿಂತ ಅತ್ಯಂತ ಕ್ರಿಯಾಶೀಲವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದು ನಾನೇ. ಕಾರಣಕ್ಕಾಗಿಯೇ ಕಾಂಗ್ರೆಸ್ ನಾಯಕರು ನನ್ನ ನಡೆಗೆ ವಿಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಕರಿಗಿಂತ ಹೆಚ್ಚು ಕೆಲಸ ಮಾಡಿದ್ದಾಗಿ ಹೊಗಳಿದ್ದಾರೆ ಎಂದರು.

Advertisement

ಬಿಜೆಪಿ ಜೋಡೆತ್ತುಗಳಿಗಿಂತ ನಾನೇ ಹೆಚ್ಚು ಮಾತನಾಡಿ, ಉತ್ತರ ಕರ್ನಾಟಕದಲ್ಲೂ ಸಮರ್ಥ ನಾಯಕರಿದ್ದಾರೆ ಎಂದು ತೋರಿಸಿದ್ದೇನೆ. ವಿಪಕ್ಷದ ನಾಯಕನಾಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಾನೇ ಸದನದಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಇದರೊಂದಿಗೆ ಉತ್ತರ ಕರ್ನಾಟಕದ ಅಸ್ತಿತ್ವವನ್ನು ತೋರಿಸಿದ್ದೇನೆ ಎಂದು ಸ್ವಪಕ್ಷೀಯ ನಾಯಕರ ವಿರುದ್ಧ ಕಿಡಿ ಕಾರಿದರು.

ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನನ್ನ ವಿರುದ್ಧ ಮಾತನಾಡಲು ಮುರುಗೇಶ ನಿರಾಣಿ ಅವರಂಥ ಕೆಲವರನ್ನು ಬಿಟ್ಟಿದ್ದಾನೆ ಎಂದು ಏಕ ವಚನದಲ್ಲೇ ಪ್ರಾಣಿಗಳಿಗೆ ಹೋಲಿಸಿ ಅಶ್ಲೀಲ ಪದಗಲಿಂದ ವಾಗ್ದಾಳಿ ನಡೆಸಿದರು.

ಭ್ರಷ್ಟಾಚಾರ ಆರೋಪದ ಸಿಬಿಐ ತನಿಖೆ ಹಿಂಪಡೆದ ಸರ್ಕಾರದ ನಡೆ ಹಾಗೂ ಮಹಿಳೆಯ ಬೆತ್ತಲೆ ಪ್ರಕರಣದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಜೋಡೆತ್ತಿಗಳು ಹೇಳಿದ್ದವು. ಉಗ್ರ ಹೋರಾಟ ಮಾಡದೇ, ಖಂಡನೆ, ಹೇಳಿಕೆಗೆ ಇವರ ಹೋರಾಟ ಸೀಮಿತವಾಗಿತ್ತು ಎಂದು ಆರ್. ಅಶೋಕ, ವಿಜಯೇಂದ್ರ ವಿರುದ್ಧ ಕಿಡಿ ಕಾರಿದರು.

ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕರೆ ಮಾಡಿದಾಗ ಎಚ್ಚೆತ್ತ ವಿಪಕ್ಷದ ನಾಯಕರು ನಿನ್ನೆ 6-30 ಕ್ಕೆ ಕರೆ ಮಾಡಿ ಎಲ್ಲಿದ್ದೀರಾ ಎಂದು ಕೇಳಿದ್ದಾರೆ. ಬರೀ ಖಂಡಿಸಿ, ಟ್ವೀಟ್ ಹಾಕಿದರೆ ಸಾಲದು, ಪ್ರಾಮಾಣಿವಾಗಿ ಹೋರಾಟ ಮಾಡಬೇಕು ಎಂದು ಸ್ವಪಕ್ಷೀಯರ ವಿರುದ್ಧ ಕುಟುಕಿದರು.

ಅದೇ ಕಾರಣಕ್ಕೆ ನಾನು ಡಿ.ಕೆ.ಶಿವಕುಮಾರ ಪ್ರಕರಣದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದು. ಇನ್ನಾದರೂ ವಿಪಕ್ಷದ ನಮ್ಮ ನಾಯಕರು ಗಟ್ಟಿಗರಾಗಬೇಕೋ, ಬೇಡವೋ ಎಂದು ಮಾಧ್ಯಮಗಳೇ ವಿಶ್ಲೇಷಿಸಲಿ.

ಆಧಿವೇಶನದಲ್ಲಿ ವಿರೋಧ ಪಕ್ಷ ಹೇಗೆ ಕೆಲಸ ಮಾಡಿದೆ ಎಂದು ಮಾಧ್ಯಮಗಳೇ ಹೇಳಿವೆ ಎಂದು ಹರಿಹಾಯ್ದರು.

ಪಿಎಸ್‍ಐ ಪರೀಕ್ಷೆ ಮುಂದೂಡಿಕೆ, ಪೆÇಲೀಸ್ ವರ್ಗಾವಣೆ ವಿಚಾರದ ಕುರಿತು ಸದನದಲ್ಲಿ ಮಾತನಾಡಿದ ಬಳಿಕ ಈ ನೇಮಕಾತಿ ಪರೀಕ್ಷೆ ಮುಂದೂಡಿದ್ದಾರೆ. ಪರೀಕ್ಷೆ ಅಕ್ರಮ ತಡೆಯುವುದಕ್ಕೆ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ, ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಮೂರು ಕಡೆಗಳಲ್ಲಿ ಪರೀಕ್ಷೆ ನಡೆಸಬೇಕು.
– ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಹಿರಿಯ ಶಾಸಕ ವಿಜಯಪುರ.

Advertisement

Udayavani is now on Telegram. Click here to join our channel and stay updated with the latest news.

Next