Advertisement

Barimaru: ತೋಟಕ್ಕೆ ನುಗ್ಗಿ ಜೀವ ಬೆದರಿಕೆ; ಪ್ರಕರಣ ದಾಖಲು

12:57 AM Mar 23, 2024 | Team Udayavani |

ಬಂಟ್ವಾಳ: ಬರಿಮಾರಿನಲ್ಲಿ ಅಕ್ರಮವಾಗಿ ಕೃಷಿ ತೋಟಕ್ಕೆ ನುಗ್ಗಿ ಕೃಷಿ ಹಾನಿಯ ಜತೆಗೆ ಕೃಷಿಕನಿಗೆ ಜೀವ ಬದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ಜಗದೀಶ್‌, ವಿಶ್ವನಾಥ, ಚಂದ್ರಹಾಸ, ಜಯಂತ, ಧನಂಜಯ, ಜಯಪ್ರಕಾಶ್‌, ಅಭಿಷೇಕ್‌, ಸೇಸಪ್ಪ ಪೂಜಾರಿ, ಕಾರ್ತಿಕ್‌ ಮತ್ತು ಇತರ ಆರೋಪಿಗಳ ವಿರುದ್ಧ ಬರಿಮಾರು ನಿವಾಸಿ ರತ್ನಾಕರ ಪೂಜಾರಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಬರಿಮಾರಿನಲ್ಲಿ ರತ್ನಾಕರ ಅವರ ಪತ್ನಿ ಶಾರದಾ ಹೆಸರನಲ್ಲಿರುವ ಭೂಮಿಯಲ್ಲಿ ಅಡಿಕೆ ಕೃಷಿ ಇದ್ದು, ಆರೋಪಿಗಳು ತೋಟಕ್ಕೆ ನುಗ್ಗಿ ಸುಮಾರು 250 ಅಡಿಕೆ ಗಿಡಗಳನ್ನು ಕಿತ್ತು ರಿಕ್ಷಾದಲ್ಲಿ ಸಾಗಿಸುತ್ತಿದ್ದ ವೇಳೆ ರತ್ನಾಕರ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ವೇಳೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ತಡೆಯಲು ಬಂದರೆ ಕೈಕಾಲು ಕಡಿಯುವುದಾಗಿ ಜೀವ ಬೆದರಿಕೆಯೊಡ್ಡಿ ಪರಾರಿಯಾಗಿದ್ದರು. ಘಟನೆಯಿಂದ ರತ್ನಾಕರ ಅವರಿಗೆ ಸುಮಾರು 1 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next