Advertisement

ಬಾರಕೂರು ಹಾಲೆಕೊಡಿ: ಸೀತಾನದಿ ಪಾಲಾದ ಸಂಬಂಧಿಕರ ಮನೆಗೆ ಬಂದಿದ್ದ ಇಬ್ಬರು ಯುವಕರು

03:11 PM Jul 03, 2020 | keerthan |

ಬ್ರಹ್ಮಾವರ: ಸೀತಾನದಿ ನೀರಿಗೆ ಇಳಿದಿದ್ದ ಇಬ್ಬರು ಯುವಕರು ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾದ ಘಟನೆ ಬಾರಕೂರಿನ ಹಾಲೆಕೊಡಿ ಎಂಬಲ್ಲಿ ಶುಕ್ರವಾರ ನಡೆದಿದೆ.

Advertisement

ಕಾರ್ತಿಕ್ (20) ಮತ್ತು ಹರ್ಷ (20) ಎನ್ನುವ ಯುವಕರು ನೀರಿನ ಸೆಳೆತಕ್ಕೆ ಸಿಲುಕಿ ಸೀತಾ ನದಿ ಪಾಲಾದವರು.

ಇವರಿಬ್ಬರೂ ನೆರೆಯ ಹೇರಾಡಿ ಗ್ರಾಮದವರಾಗಿದ್ದು, ಸಂಬಂಧಿಕರ ಮನೆಗೆಂದು ಹಾಲೆಕೊಡಿಗೆ ಬಂದಿದ್ದರು. ಇನ್ನೊಬ್ಬ ಯುವಕನೊಂದಿಗೆ ಸೇರಿ ಇಂದು ಮುಂಜಾನೆ ಸೀತಾನದಿಗೆ ಇಳಿದಿದ್ದರು ಎನ್ನಲಾಗಿದೆ. ಈ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಬದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಈ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾಗಿದ್ದಾರೆ.

ಸ್ಥಳೀಯ ಈಜುಗಾರರು ನೀರಿಗೆ ಧುಮುಕಿ ಓರ್ವನ ಶವವನ್ನು ಹೊರತೆಗೆದಿದ್ದಾರೆ. ಮತ್ತೋರ್ವನಿಗಾಗಿ ಕಾರ್ಯಾಚರಣೆ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next