Advertisement

Barachukki Waterfalls; ಬೆಂಗಳೂರಿನಿಂದ ಬಂದ ಓರ್ವ ಯುವಕ ನೀರುಪಾಲು

08:42 PM Sep 04, 2023 | Team Udayavani |

ಕೊಳ್ಳೇಗಾಲ: ತಾಲೂಕಿನ ಶಿವನ ಸಮುದ್ರದ ಬಳಿ ಇರುವ ಭರಚುಕ್ಕಿ ಜಲಪಾತ ವೀಕ್ಷಣೆಗೆಂದು ಬೆಂಗಳೂರಿನಿಂದ ಬಂದ ಐದು ಯುವಕರ ಪೈಕಿ ಓರ್ವ ನೀರುಪಾಲಾದ ಘಟನೆ ಸೋಮವಾರ ನಡೆದಿದೆ.

Advertisement

ಪುನಿತ್ (18). ಲೋಹಿತ್ (19) ಇಬ್ಬರು ಸೆಲ್ಫಿ ತೆಗೆದುಕೊಳ್ಳಲು ನೀರಿಗೆ ಇಳಿದಾಗ ಪುನಿತ್ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರುಪಾಲಾಗಿದ್ದಾನೆ. ಜತೆಯಲ್ಲಿ ಬಂದಿದ್ದ ಲೋಹಿತ್,ಪವನ್,ತೇಜಶ್ವಿನಿ, ರೀಷ ಪಾರಾಗಿದ್ದಾರೆ.

ಕಾವೇರಿ ನದಿಯಲ್ಲಿ ಬಿದ್ದ ಮೃತದೇಹವನ್ನು ಈಜುಗಾರರಾದ ಶಾಂತ ರಾಜು, ಮಹೇಶ, ಲಿಂಗಣ್ಣ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮಾಂತರ ಪೊಲೀಸರು ಪೋಷಕರಿಗೆ ಮಾಹಿತಿ ನೀಡಿ ಪ್ರಕರಣದ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next