Advertisement

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ‘ಬಾರ್‌’ ಸೀಜ್‌

06:54 PM Apr 21, 2021 | Team Udayavani |

ಜಮಖಂಡಿ: ತಾಲೂಕಿನಲ್ಲಿ ಕೋವಿಡ್ 2ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಬಾರ್‌ಮತ್ತು ರೆಸ್ಟೊರೆಂಟ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು, ಮಾಸ್ಕ್ ಧರಿಸದೇ ವ್ಯವಹಾರ ನಡೆಸುತ್ತಿರುವುದನ್ನು ಗಮನಿಸಿದ ಉಪವಿಭಾಗಾಧಿಕಾರಿ ಡಾ|ಸಿದ್ದು ಹುಲ್ಲೊಳ್ಳಿ ನಗರದ ಬಾರ್‌ ಮತ್ತು ರೆಸ್ಟೊರೆಂಟ್‌ ಒಂದಕ್ಕೆ ಬೀಗ ಜಡಿದರು.

Advertisement

ತಾಲೂಕಿನಲ್ಲಿ ಬಹುತೇಕ ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸರ್ಕಾರದ ಕೊರೊನಾ ಮಾರ್ಗಸೂಚಿ ಪಾಲಿಸದೇ ಬೇಕಾಬಿಟ್ಟಿ ವ್ಯವಹಾರ ನಡೆಸುತ್ತಿದ್ದರು. ಗ್ರಾಹಕರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬಾರ್‌ ಗಳಲ್ಲಿ ವಿಪರೀತ ಜನಸಂದಣಿ ಸೇರಿಸುವುದನ್ನು ಮಾಹಿತಿ ಸಂಗ್ರಹಿಸಿದ ಗಮನಿಸಿದ ಎಸಿ ಡಾ| ಸಿದ್ದು ಹುಲ್ಲೋಳ್ಳಿ ಹಠಾತ್‌ ದಾಳಿ ನಡೆಸಿ ಅಲ್ಲಿರುವ ಜನಜಂಗುಳಿಯನ್ನು ವೀಕ್ಷಿಸಿ ದಂಗಾದರು.

ಕೂಡಲೇ ಗ್ರಾಹಕರನ್ನು ಹೊರಹಾಕುವಂತೆ ಸೂಚಿಸಿದರು. ಅಬಕಾರಿ ಅಧಿಕಾರಿ ಸಂಗಮೇಶ ಮುರನಾಳ ಭೇಟಿ ನೀಡಿ, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಬಾರ್‌, ಮದ್ಯದ ಅಂಗಡಿಗಳ ಮೇಲೆ ನಿಗಾವಹಿಸುವಂತೆ ಆದೇಶಿಸಿದರು. ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಸರಕಾರಿ ಇಲಾಖೆಗಳ ಅಧಿಕಾರಿಗಳೇ ನಿಷ್ಕಾಳಜಿ ತೋರಬಾರದು ಎಂದು ಸೂಚಿಸಿದರು.

ವೃತ್ತ ನಿರೀಕ್ಷಕ ಈರಯ್ನಾ ಮಠಪತಿ, ಪಿಎಸ್‌ಐ ಶಶಿಕುಮಾರ ಕುರಳೆ, ಅಬಕಾರಿ ಅಧಿಕಾರಿ ಸಂಗಮೇಶ ಮುರನಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next