Advertisement

ಬಂಟ್ವಾಳ : ನೀರೆತ್ತಲು ಹೋಗಿದ್ದ ನವ ವಿವಾಹಿತೆ ಬಾವಿಗೆ ಬಿದ್ದು ಸಾವು

01:11 AM May 30, 2022 | Team Udayavani |

ಬಂಟ್ವಾಳ : ತೆರೆದ ಬಾವಿಯಿಂದ ನೀರೆತ್ತಲು ಹೋಗಿದ್ದ ನವ ವಿವಾಹಿತೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ರವಿವಾರ ಕಲ್ಲಡ್ಕದ ಕೆ.ಸಿ.ರೋಡು ಬಳಿ ಸಂಭವಿಸಿದೆ.

Advertisement

ಕೆ.ಸಿ. ರೋಡು ನಿವಾಸಿ, ಇಬ್ರಾಹಿಂ ತೌಸೀರ್‌ ಅವರ ಪತ್ನಿ ಮುನೀಝಾ(20) ಮೃತರು. ಮೂಲತಃ ಬಿ.ಸಿ.ರೋಡಿನ ತಲಪಾಡಿ ನಿವಾಸಿ, ಫರಂಗಿಪೇಟೆ ಸಮೀಪದ ಅಮ್ಮೆಮ್ಮಾರ್‌ನಲ್ಲಿ ವಾಸವಿದ್ದ ಮುಹಮ್ಮದ್‌ ಅವರ ಪುತ್ರಿಯಾಗಿರುವ ಮುನೀಝಾ ಅವರನ್ನು ಎರಡು ತಿಂಗಳ ಹಿಂದೆಯಷ್ಟೇ ಇಬ್ರಾಹಿಂ ತೌಸೀರ್‌ಗೆ ವಿವಾಹ ಮಾಡಿಕೊಡಲಾಗಿತ್ತು.

ಮುನೀಝಾ ರವಿವಾರ ಬೆಳಗ್ಗೆ ಮನೆಗೆ ನೀರು ತರುವುದಕ್ಕಾಗಿ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next