Advertisement

Bantwal: ಕಸಕ್ಕೆ ಬೆಂಕಿ ಕೊಡುವ ವೇಳೆ ಬೆಂಕಿ ತಗಲಿ ವಿದ್ಯಾರ್ಥಿಗೆ ಗಾಯ

10:27 PM Mar 02, 2024 | Team Udayavani |

ಬಂಟ್ವಾಳ: ಬಂಟ್ವಾಳದ ಸರಕಾರಿ ಶಾಲೆಯೊಂದರಲ್ಲಿ ಶಾಲೆಯ ಆವರಣದ ಕಸವನ್ನು ರಾಶಿ ಹಾಕಿ ಬೆಂಕಿ ಹಾಕುವ ವೇಳೆ ವಿದ್ಯಾರ್ಥಿಯೋರ್ವನ ಮೈ ಮೇಲೆ ಬೆಂಕಿ ತಗಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ಮಾ. 1ರಂದು ನಡೆದಿದೆ.

Advertisement

ಕಸಕ್ಕೆ ಬೆಂಕಿಯು ಬೇಗ ಹಿಡಿಯಬೇಕು ಎಂದು ಯಾವುದೋ ಇಂಧನ ಹಾಕುವ ವೇಳೆ ಏಕಾಏಕಿ ಬೆಂಕಿ ಬಾಲಕನ ಮೈಮೇಲೆ ಬಂದಿದ್ದು, ಆತನ ಕಾಲಿನ ಭಾಗಕ್ಕೆ ಬೆಂಕಿ ಹಿಡಿದಿದೆ ಎನ್ನಲಾಗಿದೆ. ಬಾಲಕನನ್ನು ಬಳಿಕ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.

ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ಠಾಣೆಯ ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next