Advertisement

Bantwala: ನೇತ್ರಾವತಿ ನದಿಯು ಪ್ರವಾಹ; ಹಲವೆಡೆ ಹಲವು ಅವಾಂತರ

10:05 AM Jul 31, 2024 | Team Udayavani |

ಬಂಟ್ವಾಳ: ನೇತ್ರಾವತಿ ನದಿಯು ಪ್ರವಾಹವನ್ನು ತಗ್ಗಿಸಿ ಆತಂಕ ದೂರ ಮಾಡಿದ್ದರೂ ಮುಳುಗಡೆಯಾಗಿದ್ದ ಬಂಟ್ವಾಳ ಬಸ್ತಿಪಡ್ಪುನಿಂದ ಕಂಚಿಕಾರಪೇಟೆಯ ಮೂಲಕ ಗೂಡಿನ ಬಳಿಗೆ ಸಂಪೂರ್ಣ ಕಲ್ಪಿಸುವ ರಸ್ತೆಯೇ ನೇತ್ರಾವತಿ ಪಾಲಾಗಿದೆ.

Advertisement

ನೇತ್ರಾವತಿ ನದಿ ಕಿನಾರೆಯಲ್ಲಿ ಹಾದುಹೋಗುವ ಈ ರಸ್ತೆಯು ಪಾಣೆಮಂಗಳೂರು ಕಡೆಯಿಂದ ಬಂಟ್ವಾಳಕ್ಕೆ ಬರುವ ಹಳೆಯ ಒಳರಸ್ತೆಯಾಗಿದ್ದು, ಇಲ್ಲಿ ಕಂಚಿಕಾರಪೇಟೆಯಲ್ಲಿ ಡಾಮರು ರಸ್ತೆಯ ಡಾಮಾರು ನೆರೆಯ ರಭಸಕ್ಕೆ ಸಿಕ್ಕಿ ನೇತ್ರಾವತಿ ‌ನದಿಯ ಒಡಲನ್ನು ಸೇರಿದೆ.

ಪಾಣೆಮಂಗಳೂರು ಹಳೆಯ ಬ್ರಿಟಿಷ್ ಕಾಲದ ಸೇತುವೆಯ ಮೂಲಕ ಬಂದವರು ಬಂಟ್ವಾಳಕ್ಕೆ ತೆರಳಲು ಬಲು ಸುಲಭದ ರಸ್ತೆ ಇದಾಗಿತ್ತು. ನೆರೆ ಬಂದಾಗ ವೀಕ್ಷಿಸಲು ಅವಕಾಶ ನೀಡುತ್ತಿದ್ದ ರಸ್ತೆ ಇದೀಗ ಬೊಲ್ಲದೊಂದಿಗೆ ಸೇರಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next