Advertisement

ಬಂಟ್ವಾಳ: ಜನಾರ್ದನ ಪೂಜಾರಿ ಆಶೀರ್ವಾದ ಪಡೆದ ಖಾದರ್‌

12:19 AM May 30, 2023 | Team Udayavani |

ಬಂಟ್ವಾಳ : ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಸೋಮವಾರ ಸಂಜೆ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್‌ ಮುಂದಾಳು ಬಿ.ಜನಾರ್ದನ ಪೂಜಾರಿ ಅವರನ್ನು ಬಂಟ್ವಾಳದ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು.

Advertisement

ಈ ವೇಳೆ ಅಭಿನಂದಿಸಿ ಮಾತನಾಡಿದ ಪೂಜಾರಿಯವರು, ಖಾದರ್‌ ತಂದೆಯ ಸಾಧನೆಯನ್ನು ಮೀರಿ ಬೆಳೆದಿದ್ದು, ಸ್ಪೀಕರ್‌ ಸ್ಥಾನದ ಮಹತ್ವವನ್ನು ಅರಿಯದೆ ಕೆಲವರು ಅದು ಬೇಡ ಎಂದಿದ್ದಾರೆ. ಆದರೆ ಅದು ಅತ್ಯಂತ ಗೌರವಯುತ ಹುದ್ದೆಯಾಗಿದ್ದು, ಈ ಮೂಲಕ ಖಾದರ್‌ ಅವರ ಘನತೆಯೂ ಹೆಚ್ಚಿದೆ ಎಂದು ಹಾರೈಸಿದರು.

ಆ ಬಳಿಕ ಪತ್ರಕರ್ತರ ಜತೆ ಖಾದರ್‌ ಮಾತನಾಡಿ, ರಾಜಕೀಯವಾಗಿ ಬೆಳೆ ಸಿದ ಜನಾರ್ದನ ಪೂಜಾರಿ ಅವ ರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ. ಹಿರಿಯರಾದ ವೈಕುಂಠ ಬಾಳಿಗ, ಕೆ.ಎಸ್‌. ಹೆಗ್ಡೆ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದು, ಅದಕ್ಕೆ ಅನುಗುಣವಾಗಿ ನಡೆದುಕೊಂಡು ಕ್ಷೇತ್ರದ ಜನತೆಯ ಗೌರವ ಉಳಿಸಲಿದ್ದೇನೆ ಎಂದರು. ಈ ವೇಳೆ ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಮಂಗಳೂರು ತಾ.ಪಂ.ಮಾಜಿ ಅಧ್ಯಕ್ಷ ಮಹಮ್ಮದ್‌ ಮೋನು ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next