Advertisement

ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತೆಂಬ ಕಾರಣಕ್ಕೆ ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ

10:07 AM Mar 15, 2020 | keerthan |

ಬಂಟ್ವಾಳ: ಎಂಬಿಎ ವಿದ್ಯಾರ್ಥಿಯೋರ್ವಳು ಪರೀಕ್ಷೆಯಲ್ಲಿ ಗಳಿಸಿದ ಅಂಕ ಕಡಿಮೆಯಾಯಿತು ಎಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಅಮ್ಟಾಡಿ ಮೇಲಿನ ಏರಿಯಾ ಎಂಬಲ್ಲಿ ನಡೆದಿದೆ.

Advertisement

ಖಾಸಗಿ ಕಾಲೇಜೊಂದರ ಪ್ರಥಮ ಎಂ.ಬಿ.ಎ. ವಿದ್ಯಾರ್ಥಿ ನಿ ರಕ್ಷಿತಾ( 23) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಅಮ್ಟಾಡಿ ನಿವಾಸಿ ಯಾದವ ಎಂಬರ ಮಗಳು ರಕ್ಷಿತಾ ಎಂಬಿಎ ಓದುತ್ತಿದ್ದರು. ಪ್ರಥಮ ಸೆಮಿಸ್ಟರ್ ನಲ್ಲಿ ಅಂಕ ಕಡಿಮೆಯಾಗಿದೆ ಎಂಬ ಕಾರಣಕ್ಕಾಗಿ ನೊಂದು ಮನೆಯ ಅಡುಗೆ ಕೋಣೆಯಲ್ಲಿ ಚೂಡಿದಾರ್ ಶಾಲು ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next