Advertisement
ಗ್ರಾಮೀಣ ಭಾಗದಲ್ಲಿ ಕೊಳವೆಬಾವಿ ಹಾಗೂ ತೆರೆದ ಬಾವಿಗಳೇ ಜಲಮೂಲವಾದರೂ ತಾಲೂಕಿನಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡರೆ ಇಡೀ ತಾಲೂಕಿನ ಗ್ರಾಮೀಣ ಭಾಗಗಳ ನೀರಿನ ಬವಣೆ ನೀಗಲಿದೆ.
ವ್ಯತ್ಯಯ ವಾಗುತ್ತದೆ. ಒಂದು ಕಡೆ ಪೈಪ್ ಒಡೆದು ಹೋದರೆ ದುರಸ್ತಿಗೆ ಮೂರ್ನಾಲ್ಕು ದಿನಗಳೇ ಬೇಕಾಗುತ್ತವೆ ಎಂದು ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರು ಹೇಳುತ್ತಾರೆ. ಐದು ಶಾಶ್ವತ ಯೋಜನೆಗಳು
ಹಿಂದೆ ಬಿ. ರಮಾನಾಥ ರೈ ಅವರು ಸಚಿವರಾಗಿದ್ದ ಸಂದರ್ಭ ಬಂಟ್ವಾಳ ತಾಲೂಕಿಗೆ ಒಟ್ಟು 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಮಂಜೂರಾಗಿದ್ದವು. ಅವುಗಳ ಎರಡು ಯೋಜನೆಗಳು ಪೂರ್ಣಗೊಂಡಿದ್ದು, ಮೂರರ ಕಾಮಗಾರಿ ಪ್ರಗತಿಯಲ್ಲಿದೆ.
Related Articles
Advertisement
ಕೊರತೆಗೆ ಕಾರಣಬೇಸಗೆಯ ಅವಧಿಯಲ್ಲಿ ಕೊಳವೆಬಾವಿಗಳಲ್ಲಿ ನೀರಿನ ಕೊರತೆ, ತೆರೆದ ಬಾವಿಗಳಲ್ಲೂ ನೀರಿನ ಕೊರತೆ, ಹೊಸ ಕೊಳವೆಬಾವಿಗಳಲ್ಲಿ ನೀರು ಇಲ್ಲದೇ ಇರುವುದು, ಮುಖ್ಯ ಪೈಪ್ ಒಡೆದು ಹೋಗುವ ಸಮಸ್ಯೆ, ವಿದ್ಯುತ್ ಕಡಿತ, ಮಳೆಕೊçಲು, ಜಲ ಮರುಪೂರಣಕ್ಕೆ ಗಂಭೀರ ಪ್ರಯತ್ನ ನಡೆದಿಲ್ಲ. 25 ಲಕ್ಷ ರೂ. ಅನುದಾನ
ಪ್ರಸ್ತುತ ದಿನಗಳಲ್ಲಿ ನೀರಿನ ಕೊರತೆಯ ಗಂಭೀರ ಸಮಸ್ಯೆಯಿಲ್ಲ. ಕೊಳವೆಬಾವಿಗಳಿಗೆ ಬೇಡಿಕೆ ಬಂದಿದ್ದು, ಅವುಗಳನ್ನು ಕೊರೆಯುವ ಕೆಲಸಗಳು ಆರಂಭಗೊಂಡಿವೆ. ಕುಡಿಯುವ ನೀರು ಪೂರೈಕೆಗಾಗಿ ಟಾಸ್ಕ್
ಪೋರ್ಸ್ನಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ 25 ಲಕ್ಷ ರೂ.ಬಂದಿದ್ದು, ಅದನ್ನು ಸಂಬಂಧಪಟ್ಟವರ ನಿರ್ದೇಶನದಂತೆ ಹಂಚಿಕೆ ಮಾಡುವ ಕೆಲಸ ಮಾಡಲಾಗುತ್ತದೆ. ನೀರಿನ ಗಂಭೀರ ಸಮಸ್ಯೆಗಳು ಕಂಡುಬಂದಲ್ಲಿ ಅವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಿಸಲಿದೆ.
- ರಾಜಣ್ಣ, ಇಒ, ಬಂಟ್ವಾಳ ತಾ.ಪಂ