Advertisement

Bantwal ಕೋಟೆಕಣಿ: ಹೊಂಡಕ್ಕೆ ಬಿದ್ದ ಕಾರು; ಐವರಿಗೆ ಗಾಯ

12:28 AM Mar 04, 2024 | Team Udayavani |

ಬಂಟ್ವಾಳ: ಸಜೀಪನಡು ಗ್ರಾಮದ ಕೋಟೆಕಣಿಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದು ಐವರು ಪ್ರಯಾಣಿಕರು ಗಾಯಗೊಂಡ ಘಟನೆ ಮಾ. 2ರಂದು ನಡೆದಿದೆ.

Advertisement

ಘಟನೆಯಲ್ಲಿ ಬಂಟ್ವಾಳ ಬಂದಾರು ನಿವಾಸಿ ಕಾರು ಚಾಲಕ ಹಮೀದ್‌, ಸಂಬಂಧಿಕರಾದ ಮೊಹಮ್ಮದ್‌ ಹನೀಫ್‌, ಜಮೀಳಾ, ಮೊಹಮ್ಮದ್‌ ಅನೀಝ್, ಮೊಹಮ್ಮದ್‌ ಝಯಾನ್‌ ಗಾಯಗೊಂಡಿದ್ದಾರೆ. ಇವರಲ್ಲಿ ಮೂವರು ದೇರಳಕಟ್ಟೆ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ.

ಘಟನೆಯ ಕುರಿತು ಚಾಲಕ ಹಮೀದ್‌ ಅವರ ಪುತ್ರ ಮೊಹಮ್ಮದ್‌ ಹನೀಫ್‌ ಪೊಲೀಸರಿಗೆ ದೂರು ನೀಡಿದ್ದು, ಚಾಲಕನ ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ಕಾರು ಹೊಂಡಕ್ಕೆ ಬಿದ್ದಿದೆ ಎಂದು ಆರೋಪಿಸಲಾಗಿದೆ. ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next