Advertisement

ಬಂಟ್ವಾಳ ಕೇಸು ಡೈರಿ ಹಾಜರುಪಡಿಸಿ: ಹೈಕೋರ್ಟ್‌ ಸೂಚನೆ

08:15 AM Aug 12, 2017 | Karthik A |

ಬೆಂಗಳೂರು: ಬಂಟ್ವಾಳ ವ್ಯಾಪ್ತಿಯಲ್ಲಿ ಶರತ್‌ ಮಡಿವಾಳ ಅಂತಿಮಯಾತ್ರೆ ವೇಳೆ ನಡೆದ ಅಹಿತಕರ ಘಟನೆ ಹಾಗೂ ಇದರಿಂದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ದಾಖಲಿಸಿರುವ ಪ್ರಕರಣದ ಕುರಿತ ‘ಕೇಸು ಡೈರಿ’ ಹಾಜರುಪಡಿಸುವಂತೆ ಹೈಕೋರ್ಟ್‌ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

Advertisement

ಪ್ರಕರಣ ಸಂಬಂಧ ಬಂಟ್ವಾಳ ಟೌನ್‌ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್‌ ರದ್ದು ಕೋರಿ ಹಿಂದೂ ಹಿತರಕ್ಷಣ ವೇದಿಕೆ ಅಧ್ಯಕ್ಷ ಮುರಳಿ ಕೃಷ್ಣ ಹಸಂತಡ್ಕ, ಸತ್ಯಜಿತ್‌ ಸುರತ್ಕಲ್‌, ಹಿಂದೂ ಜಾಗರಣ ವೇದಿಕೆಯ ಹರೀಶ್‌ ಪೂಂಜಾ,  ದಕ್ಷಿಣ ಕನ್ನಡ ಜಿಲ್ಲಾ ಬಜರಂಗ ದಳದ ಅಧ್ಯಕ್ಷ ಶರಣ್‌ ಪಂಪ್‌ವೆಲ್‌, ಗೋರಕ್ಷಕ್‌ ಪ್ರಮುಖ್‌ ಸಂಘದ ಪ್ರದೀಪ್‌ ಕುಮಾರ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್‌, ಪ್ರಕರಣದ ಕುರಿತ ಕೇಸು ಡೈರಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next