Advertisement

Bantwal:ಕಾರು-ಸ್ಕೂಟರ್‌ ಢಿಕ್ಕಿ: ಸವಾರರಿಗೆ ಗಾಯ

10:53 PM Aug 22, 2023 | Team Udayavani |

ಬಂಟ್ವಾಳ: ಬಂಟ್ವಾಳ-ಮೂಡುಬಿದಿರೆ ರಸ್ತೆಯ ಸಿದ್ದಕಟ್ಟೆಯಲ್ಲಿ ಕಾರು ಹಾಗೂ ಸ್ಕೂಟರ್‌ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಾಯಗೊಂಡ ಘಟನೆ ನಡೆದಿದೆ.

Advertisement

ಉಳಿ ಗ್ರಾಮದ ನಿವಾಸಿಗಳಾದ ಸವಾರ ಅಣ್ಣು ಹಾಗೂ ಸಹಸವಾರ ಚೆನ್ನಪ್ಪ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್‌ಗೆ ಟಾಟಾ ಏಸ್‌ ಢಿಕ್ಕಿ
ಬಂಟ್ವಾಳ: ಸಜೀಪಮೂಡ ಗ್ರಾಮದ ಬೇಂಕ್ಯದಲ್ಲಿ ಸ್ಕೂಟರೊಂದಕ್ಕೆ ಹಿಂದಿನಿಂದ ಟಾಟಾ ಏಸ್‌ ವಾಹನ ಢಿಕ್ಕಿ ಹೊಡೆದು ಮೂವರು ಸವಾರರು ಗಾಯಗೊಂಡ ಘಟನೆ ಆ. 21ರಂದು ನಡೆದಿದೆ.

ಸಜೀಪಮುನ್ನೂರು ಗ್ರಾಮ ನಿವಾಸಿ ಸ್ಕೂಟರ್‌ ಸವಾರ ಕೃಷ್ಣ ಕಾರಂತ ಹಾಗೂ ಹಿಂಬದಿ ಕುಳಿತಿದ್ದ ಪುತ್ರಿಯರಾದ ವೈಷ್ಣವಿ ಹಾಗೂ ಅನನ್ಯಾ ಅವರಿಗೆ ಗಾಯಗಳಾಗಿವೆ. ಏಸ್‌ ವಾಹನ ಚಾಲಕ ಜುಬೇರ್‌ ದುಡುಕುತನದಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಅಪಘಾತ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next