Advertisement

Bantwal ಮನೆಗೆ ನುಗ್ಗಿ ಚೂರಿಯಿಂದ ಇರಿದು ಪರಾರಿ

09:25 PM Apr 08, 2024 | Team Udayavani |

ಬಂಟ್ವಾಳ: ಆರೋಪಿಯೋರ್ವ ಮನೆಗೆ ನುಗ್ಗಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಗಾಯಗೊಳಿಸಿ ಪರಾರಿಯಾದ ಘಟನೆ ಎ. 7ರಂದು ಪುದುವಿನಲ್ಲಿ ನಡೆದಿದೆ.

Advertisement

ಆರೋಪಿ ಅಬ್ದುಲ್‌ ರಹಿಮಾನ್‌ ಯಾನೆ ಮುನ್ನಿ ಎಂಬಾತ ಮಹಮ್ಮದ್‌ ಬಿಲಾಲ್‌ ಅವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ ಎಂದು ಬಿಲಾಲ್‌ ಅವರ ತಮ್ಮ ಮಹಮ್ಮದ್‌ ರಮೀಜ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಬಿಲಾಲ್‌ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯು ಚೂರಿಯಿಂದ 2 ಬಾರಿ ಹೊಟ್ಟೆಗೆ ಇರಿದಿರುವುದಾಗಿ ಆರೋಪಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next