Advertisement

Bantwal;ಆಟವಾಡಲು ಹೋಗಿದ್ದ ಬಾಲಕ ನದಿಯಲ್ಲಿ ಮುಳುಗಿ ಸಾವು

11:01 PM Jan 18, 2024 | Team Udayavani |

ಬಂಟ್ವಾಳ: ನೆರೆ ಹೊರೆಯ ಸಂಬಂಧಿಕ ಮಕ್ಕಳ ಜತೆ ನೇತ್ರಾವತಿ ನದಿ ಕಿನಾರೆಗೆ ಆಟವಾಡಲು ಹೋಗಿ ಬಾಲಕನೋರ್ವ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಾವೂರು ಗ್ರಾಮದ ಕೂಡಿಬೈಲು ಬಳಿಯ ನೆಕ್ಕಿಲಾರುನಲ್ಲಿ ನಡೆದಿದೆ.

Advertisement

ನಾವೂರು ಗ್ರಾಮದ ಕೂಡಿಬೈಲು ನಿವಾಸಿ ಪುಟ್ಟಣ್ಣ ನಾಯಕ್‌ ಅವರ ಪುತ್ರ ಪ್ರಜ್ವಲ್‌ ನಾಯಕ್‌ (14) ಮೃತ ಬಾಲಕ. ನಾಲ್ಕೈದು ಜನ ಮಕ್ಕಳು ನದಿ ಬದಿಗೆ ಆಟವಾಡಲು ತೆರಳಿದ್ದು, ಈ ವೇಳೆ ಆತ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ತತ್‌ಕ್ಷಣ ಜತೆಗಿದ್ದವರು ಆತನ ರಕ್ಷಣೆಗೆ ಮುಂದಾದರೂ, ಈ ಭಾಗದಲ್ಲಿ ನದಿಯಲ್ಲಿ ಸಾಕಷ್ಟು ಆಳವಿದ್ದ ಹಿನ್ನೆಲೆಯಲ್ಲಿ ಆತ ಏಕಾಏಕಿ ಮುಳುಗಿದ್ದಾನೆ.

ಪುಟ್ಟಣ್ಣ ನಾಯಕ್‌ ಅವರ ಇಬ್ಬರು ಮಕ್ಕಳಲ್ಲಿ ಕಿರಿಯವನಾಗಿರುವ ಪ್ರಜ್ವಲ್‌ ಬಂಟ್ವಾಳ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಆತನ ಅಕ್ಕ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next