Advertisement

Bantwal ನೆರೆಮನೆಯ ವ್ಯಕ್ತಿಗೆ ದೊಣ್ಣೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ; ದೂರು

12:27 AM Sep 05, 2023 | Team Udayavani |

ಬಂಟ್ವಾಳ: ಮೇರಮಜಲಿನಲ್ಲಿ ನೆರೆಮನೆಯ ವ್ಯಕ್ತಿಗೆ ಆರೋಪಿಯೋರ್ವ ಅವಾಚ್ಯ ಶಬ್ದಗಳಿಂದ ಬೈದು ಮರದ ದೊಣ್ಣೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಸೆ. 2ರಂದು ರಾತ್ರಿ ನಡೆದಿದೆ.

Advertisement

ಮೇರಮಜಲು ನಿವಾಸಿ ಸಂತೋಷ ಪ್ರಕರಣ ಆರೋಪಿಯಾಗಿದ್ದು, ಈತನ ನೆರೆಮನೆಯ ವ್ಯಕ್ತಿ ದಯಾನಂದ ಅವರಿಗೆ ಹಲ್ಲೆ ನಡೆಸಿದ್ದಾನೆ. ದಯಾನಂದ ಹಾಗೂ ಅವರ ಪತ್ನಿಗೆ ರೇಷನ್‌ ಅಕ್ಕಿಯ ವಿಚಾರದಲ್ಲಿ ಅಗಾಗ ಜಗಳವಾಗುತ್ತಿತ್ತು.

ಇದೇ ವಿಚಾರಕ್ಕೆ ಸಂಬಂಧಿಸಿ ಆರೋಪಿ ಸಂತೋಷನು ದಯಾನಂದರಿಗೆ ಬೈಯುತ್ತಿದ್ದ.
ಇದೇ ವಿಚಾರದ ಮುಂದುವರಿದ ಭಾಗವಾಗಿ ಸೆ. 2ರಂದು ರಾತ್ರಿ ಆರೋಪಿಯು ದಯಾನಂದರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವ್ಯಾಚವಾಗಿ ಬೈದು, ದೊಣ್ಣೆಯಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾನೆ.

ಹಲ್ಲೆಯಿಂದ ಗಾಯಗೊಂಡ ದಯಾನಂದ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next