Advertisement

Court ಮಾನಹಾನಿ ಹೇಳಿಕೆಗೆ ತಡೆ ನೀಡಿದ ಬಂಟ್ವಾಳ ನ್ಯಾಯಾಲಯ

12:03 AM Oct 21, 2023 | Team Udayavani |

ಬಂಟ್ವಾಳ: ವ್ಯಕ್ತಿಯೊಬ್ಬರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದ ಮಾನಹಾನಿಕಾರಕ ಸಂದೇಶಗಳ ವಿರುದ್ಧ ಅವರು ಬಂಟ್ವಾಳ ಪ್ರಧಾನ ಸಿವಿಲ್‌ ನ್ಯಾಯಾಲಯಕ್ಕೆ ನೀಡಿದ ದೂರಿನಂತೆ ನ್ಯಾಯಾಲಯವು ಯಾವುದೇ ಮಾನಹಾನಿ ಹೇಳಿಕೆಗಳನ್ನು ಪ್ರಕಟಿಸದಂತೆ ತಡೆಯಾಜ್ಞೆ ನೀಡಿದೆ.

Advertisement

ಪುಂಜಾಲಕಟ್ಟೆ ನಿವಾಸಿ ಪ್ರಶಾಂತ್‌ ಎಂ. ಅವರು ತಮ್ಮ ವಿರುದ್ಧ ಪದ್ಮನಾಭ ಸಾಮಂತ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ಸಂದೇಶ ಹರಡುತ್ತಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಅವರ ದೂರಿನ ಆಧಾರದಲ್ಲಿ ನ್ಯಾಯಾಲಯವು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಯಾವುದೇ ರೀತಿಯ ಅವಹೇಳನಕಾರಿ ಅಸಭ್ಯ ಹೇಳಿಕೆಗಳನ್ನು ಪ್ರಕಟಿಸಿದಂತೆ ತಡೆಯಾಜ್ಞೆ ನೀಡಿದೆ. ದೂರುದಾರರ ಪರ ಬಿ.ಸಿ. ರೋಡಿನ ವಕೀಲ ಅಶ್ವಥ್‌ ಎನ್‌. ಅವರು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next