Advertisement

ಬನ್ನೇರುಘಟ್ಟ ರಸ್ತೆ:ಮೆಟ್ರೋ ಕ್ರೇನ್‌ ಢಿಕ್ಕಿ; ಸ್ಕೂಟರ್‌ ಸವಾರ ಬಲಿ

10:49 AM Jun 01, 2018 | Team Udayavani |

 ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯಲ್ಲಿ  ಮೆಟ್ರೋ ಕಾಮಗಾರಿ ನಡೆಸುತ್ತಿದ್ದ ಕ್ರೇನ್‌ ಢಿಕ್ಕಿಯಾದ ಪರಿಣಾಮ ಸ್ಕೂಟರ್‌ ಸವಾರರಾಗಿದ್ದ ಡೆಲಿವರಿ ಬಾಯ್‌ ದಾರುಣವಾಗಿ ಸಾವನ್ನಪ್ಪಿದ ದುರ್ಘ‌ಟನೆ ಗುರುವಾರ ತಡರಾತ್ರಿ ನಡೆದಿದೆ.

Advertisement

ಝೊಮೆಟೋ ಫ‌ುಡ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಉಡುಪಿಯ ಮಲ್ಪೆ ಮೂಲದ 32 ರ ಹರೆಯದ ಸುಶೀಲ್‌ ಕಾಂಚನ್‌ ಮೃತ ದುರ್ದೈವಿ. 

ಕೆಲಸ ಮುಗಿಸಿ ಅರೆಕೆರೆಯ ಮನೆಗೆ ಬರುತ್ತಿದ್ದಾಗ ಅವಘಡ ಸಂಭವಿಸಿದೆ. 
ಘಟನೆ ನಡೆದ ಬಳಿಕ ಮೆಟ್ರೋ ಕಾಮಕಾರಿ ಸಿಬಂದಿ ವಿರುದ್ಧ ಸುಶೀಲ್‌ ಸ್ನೇಹಿತರು ಆಕ್ರೋಶ ಹೊರ ಹಾಕಿದ್ದಾರೆ. 

ಮೈಕೋ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next