Advertisement

ಬಣ್ಣದೋಕುಳಿ ಸಂಭ್ರಮದಲ್ಲಿ ಕೊಲೆ

12:07 PM Mar 14, 2017 | Team Udayavani |

ಬೆಂಗಳೂರು: ಹೋಳಿ ಸಂಭ್ರಮದಲ್ಲಿದ್ದ ಸ್ನೇಹಿತರ ನಡುವೆ ನೀರಿನ ವಿಚಾರಕ್ಕೆ ಉಂಟಾದ ಜಗಳ ಕೊನೆಗೆ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಘಟನೆ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಧ್ಯಾನ್‌ಜಿತ್‌ ಸಿಂಗ್‌ (23) ಕೊಲೆಯಾದ ದುರ್ದೈವಿ. 

Advertisement

ಕೊಲೆಯಾದ ಧ್ಯಾನ್‌ಜಿತ್‌ ಹಾಗೂ ಆತನ ಸ್ನೇಹಿತರು ಕೋಣನಕುಂಟೆ ಕ್ರಾಸ್‌ ಸಮೀಪದ ಖಾಲಿ ಜಾಗದಲ್ಲಿ ಶೆಡ್‌ನ‌ಲ್ಲಿ ವಾಸಿಸುತ್ತಿದ್ದರು. ಭಾನುವಾರ ಹೋಳಿ ಹಬ್ಬದ ಪ್ರಯುಕ್ತ ಸಂಜೆ 4 ಗಂಟೆ ಸುಮಾರಿಗೆ ಸಾಮೂಹಿಕವಾಗಿ ಬಣ್ಣ ಎರಚಿಕೊಂಡು ಆಟವಾಡಿದ್ದಾರೆ.ಬಳಿಕ ಧ್ಯಾನ್‌ಜಿತ್‌ ಶೆಡ್‌ಗೆ ತೆರಳಿ ಸ್ನಾನ ಮಾಡುತ್ತಿದ್ದಾಗ ಅನಗತ್ಯವಾಗಿ ನೀರು ಪೋಲು ಮಾಡಿದ್ದಾನೆ.

ಇದನ್ನು ಕಂಡ ಸ್ನೇಹಿತರಾದ‌ ದೀಪಕ್‌ ಮಹಾಪಾತ್ರ ಮತ್ತು ಸಮರ್‌ ಎಂಬುವವರು, ನೀರು ಪೋಲು ಮಾಡದಂತೆ ಸೂಚಿಸಿದ್ದಾರೆ. ಇದೇ ವಿಚಾರವಾಗಿ ಮೂವರ ಮಧ್ಯೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿ ಅಲ್ಲಿಯೇ ಇದ್ದ  ಕಟ್ಟಿಗೆ ತೆಗೆದುಕೊಂಡ ಇಬ್ಬರು , ಧ್ಯಾನ್‌ಜಿತ್‌ಗೆ ಮೇಲೆ ಹಲ್ಲೆ ನಡೆಸಿದ್ದಾರೆ. 

ಪರಿಣಾಮ ಧ್ಯಾನ್‌ಜಿತ್‌ತಲೆಗೆ ಪೆಟ್ಟಾಗಿ ಕುಸಿದು ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ  ದಾಖಲಿಸಿದರೂ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದಾನೆ. ಈ ಸಂಬಂಧ ಇಬ್ಬರು ಆರೋಪಿಗಳು ಹಾಗೂ ಕೆಲ ಯುವಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next