Advertisement

ಸಾಲ ಕೊಡದ ಬ್ಯಾಂಕ್ ಮ್ಯಾನೇಜರ್ –ರೈತನಿಂದ ಹಲ್ಲೆ

10:58 AM Aug 26, 2019 | Team Udayavani |

ವಿಜಯಪುರ :ತನಗೆ ಸಾಲ ನೀಡದ ಬ್ಯಾಂಕ್ ಮ್ಯಾನೇಜರ್ ಗೆ ರೈತನೊಬ್ಬ ಹತಾಶನಾಗಿ ಕಪಾಳಮೋಕ್ಷ ಮಾಡಿದ ಘಟನೆ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಜರುಗಿದೆ.

Advertisement

ಎರಡು ದಿನದ ಹಿಂದೆ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ.

ಭತಗುಣಕಿ ಗ್ರಾಮದ ರೈತ ಶರಣು ಮಾಮನೆ ಎಂಬ ರೈತ ಸಾಲಕ್ಕಾಗಿ ಬ್ಯಾಂಕ್ ಗೆ ಹೋಗಿದ್ದ. ಭತಗುಣಕಿ ಶಾಖೆಯ ಬ್ಯಾಂಕ್ ಮ್ಯಾನೇಜರ್ ಬಿ.ವಿ. ಕುಲಕರ್ಣಿ ಸಾಲ ನೀಡುವ ವಿಷಯದಲ್ಲಿ ಹಲವು ದಿನಗಳಿಂದ ಅಲೆಸುತ್ತಿದ್ದರು ಎನ್ನಲಾಗಿದೆ.

ಸಾಲಕ್ಕಾಗಿ ಬ್ಯಾಂಕ್ ಗೆ ಅಲೆದಾಡಿ ರೋಸಿಹೋಗಿದ್ದ ಶರಣು ಶುಕ್ರವಾರ ಬ್ಯಾಂಕ್ ಗೆ ಆಗಮಿಸಿ‌ ಮತ್ತೆ ಸಾಲ‌ ಕೇಳಿದ್ದು, ಸಾಲ ನೀಡಿಕೆ ಕುರಿತು ಅಧಿಕಾರಿ ಸ್ಪಷ್ಟವಾಗಿ ಹೇಳದೆ ಮತ್ತೆ ಸಾಗಹಾಕಲು ಮುಂದಾಗಿದ್ದಾರೆ. ಇದರಿಂದ ಕೆರಳಿದ ಶರಣು ಮಾಮನೆ ಬ್ಯಾಂಕ್ ಕೌಂಟರ್ ಮೇಲೆ ಬಾಗಿ ಮ್ಯಾನೇಜರ್ ಕುಲಕರ್ಣಿ ಅವರ ಕೆನ್ನೆಗೆ ಬಾರಿಸಿದ್ದಾನೆ. ಸದರಿ ಹಲ್ಲೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ಮ್ಯಾನೇಜರ್ ಕುಲಕರ್ಣಿ ಇಂಡಿ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶರಣು ಬಂಧನಕ್ಕೆ ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next