Advertisement

ಜ. 31, ಫೆ. 1ಕ್ಕೆ ಬ್ಯಾಂಕ್‌ ನೌಕರರ ಮುಷ್ಕರ

11:02 PM Jan 29, 2020 | Lakshmi GovindaRaj |

ಬೆಂಗಳೂರು: ಹೊಸ ಪಿಂಚಣಿ ಯೋಜನೆ ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜ.31 ಮತ್ತು ಫೆ.1ರಂದು ಎರಡು ದಿನಗಳ ಕಾಲ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಬ್ಯಾಂಕ್‌ ಸಂಘಟನೆಗಳ ಐಕ್ಯ ವೇದಿಕೆಯು ಧರಣಿ ಹಮ್ಮಿಕೊಂಡಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಎಚ್‌.ವಿ.ರೈ ಮಾತನಾಡಿ, ನವೆಂಬರ್‌ 2017ರಿಂದ ಜಾರಿಗೆ ಬರಬೇಕಾಗಿರುವ ಬ್ಯಾಂಕ್‌ ನೌಕರರ ಮತ್ತು ಅಧಿಕಾರಿಗಳ ವೇತನ ಪರಿಷ್ಕರಣೆ ಒಪ್ಪಂದ, ಭಾರತೀಯ ಬ್ಯಾಂಕುಗಳ ಸಂಘದಿಂದ ಅಸಮರ್ಥನೀಯ ನಿರ್ವಹಣೆ ಮತ್ತು ನಿರ್ಲಕ್ಷ್ಯ ಧೋರಣೆಯಿಂದ ಬ್ಯಾಂಕ್‌ ನೌಕರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದರು.

ಪಿಂಚಣಿ ಪರಿಷ್ಕರಣೆ, ನಿವೃತ್ತಿ ಸೌಲಭ್ಯಗಳ ಮೇಲೆ ಮಿತಿರಹಿತ ವರಮಾನ ತೆರಿಗೆ ವಿನಾಯ್ತಿ, ಅಧಿಕಾರಿಗಳ ಕೆಲಸದ ನಿಗದಿತ ಅವಧಿ, ಐದು ದಿನಗಳು ಬ್ಯಾಂಕಿಂಗ್‌, ಗುತ್ತಿಗೆ ಕಾರ್ಮಿಕರು ಮತ್ತು ವ್ಯವಹಾರ ಪ್ರತಿನಿಧಿಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿ ಜಾರಿ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರದ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next