Advertisement

‘ಬಂಜಾರ ವಸ್ತ್ರ ಸಂಸ್ಕೃತಿ’  ಉಡುಪು ಬಿಡುಗಡೆಗೊಳಿಸಿದ ಬಿ.ಎಸ್. ಯಡಿಯೂರಪ್ಪ

05:57 PM Feb 14, 2021 | Team Udayavani |

ದಾವಣಗೆರೆ: ಲಂಬಾಣಿ ಸಮುದಾಯದ ಸಾಂಪ್ರದಾಯಿಕ ಉಡುಗೆಗೆ ಆಧುನಿಕ‌ ಸ್ಪರ್ಷ ನೀಡಿ ವಿಶಿಷ್ಟವಾಗಿ‌ ತಯಾರಿಸಿದ ‘ ಬಂಜಾರ ವಸ್ತ್ರ ಸಂಸ್ಕೃತಿ’  ಉಡುಪುಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಡುಗಡೆಗೊಳಿಸಿದರು.

Advertisement

ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್ ದಲ್ಲಿ ರವಿವಾರ ನಡೆದ ಸಂತ ಸೇವಾಲಾಲ್ ಅವರ 282ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಈ ಉಡುಪುಗಳನ್ನು ಬಿಡುಗಡೆಗೊಳಿಸಿದರು.

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಅಭಿವೃದ್ಧಿ ಪಡಿಸಿದ ವಸ್ತ್ರ ವಿನ್ಯಾಸ ಇದಾಗಿದೆ. ಸಾಮಾನ್ಯವಾಗಿ ಲಂಬಾಣಿ ಉಡುಗೆ ಬಹು ಆಕರ್ಷಣೀಯವಾಗಿದ್ದರೂ ಹೆಚ್ಚು ಭಾರವಿರುವ ಕಾರಣ ದಿಂದ ಮಾರುಕಟ್ಟೆಯಲ್ಲಿ ಹಿನ್ನಡೆಯಾಗಿತ್ತು.  ಈಗ ಈ ಉಡುಗೆಯ ಭಾರ ಕಡಿಮೆ ಮಾಡಿರುವುದು ವಿಶೇಷವಾಗಿದೆ. ಟೆಕ್ಸ್ ಟೈಲ್ ನಲ್ಲಿ ಉಡುಪು ಸಿದ್ಧಪಡಿಸಿ ಅವುಗಳಿಗೆ ಬಂಜಾರ ಮಹಿಳೆಯರ ಕೈ ಕಸೂತಿಯಲ್ಲಿ ಕಲೆ ಅರಳಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ:ಇಂದು ಕೃಷ್ಣ-ಮಿಲನಾ ಮದುವೆ: ಪ್ರೇಮಿಗಳ ದಿನದಂದು ಹಸೆಮಣೆಗೆ

ದೇಶ, ವಿದೇಶಗಳಿಗೂ ಈ ಉಡುಪುಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಅಮೇಜಾನ್ ನಂತಹ ಆನ್ ಲೈನ್ ಮಾರುಕಟ್ಟೆಯಲ್ಲಿಯೂ ಈ ಉಡುಗೆಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next