Advertisement

ಬಸ್‌ ಕೆಳಗೆ ಕುಳಿತು ಪ್ರಯಾಣಿಸಿದ ದಿವ್ಯಾಂಗ!

06:30 AM Oct 20, 2018 | Team Udayavani |

ಬನಹಟ್ಟಿ: ಇಲ್ಲೊಬ್ಬ ದಿವ್ಯಾಂಗನೊಬ್ಬ ಟಿಕೆಟ್‌ ಪಡೆಯಲು ಹಣವಿಲ್ಲವೆಂದು ಬಸ್‌ ಕೆಳಗೆ ಕುಳಿತು ಪ್ರಯಾಣಿಸಿದ್ದಾನೆ.ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ದಿವ್ಯಾಂಗನೊಬ್ಬ ಮದ್ಯದ ಮತ್ತಿನಲ್ಲಿ ತೇರದಾಳದ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಬಸ್‌ನ ಹಿಂಭಾಗದ ಕೆಳಗಿದ್ದ ಹೆಚ್ಚಿನ ಚಕ್ರ(ಸ್ಟೆಪ್ನಿ) ಜಾಗದಲ್ಲಿ ಕುಳಿತು ಸುಮಾರು 10 ಕಿಮೀನಷ್ಟು ದೂರದ ಬನಹಟ್ಟಿವರೆಗೆ ಪ್ರಯಾಣ ಬೆಳೆಸಿದ್ದಾನೆ.

Advertisement

ಬಸ್‌ನ ಹಿಂದೆ ಬರುತ್ತಿದ್ದ ಕಾರಿನ ಚಾಲಕನೊಬ್ಬ ಈತನ ಎರಡು ಕಾಲುಗಳನ್ನು ಕಂಡು ಗಾಬರಿಯಾದ. ಬಸ್ಸನ್ನು ಬೆನ್ನತ್ತಿ, ಬನಹಟ್ಟಿ ಬಸ್‌ ನಿಲ್ದಾಣದಲ್ಲಿ ಬಸ್‌ ಚಾಲಕನ ಗಮನಕ್ಕೆ ಇದನ್ನು ತಂದ. ಬಸ್‌ನ ಚಾಲಕ ಹಾಗೂ ನಿರ್ವಾಹಕ ಬಸ್‌ನ ಕೆಳಗಡೆ ಪರಿಶೀಲಿಸುತ್ತಿದ್ದಂತೆ ಅತಿ ಧೂಳಿನಿಂದ ತುಂಬಿದ್ದ ವ್ಯಕ್ತಿ ಕಂಡು ಬಂದ. ಆತನನ್ನು ಹೊರಕ್ಕೆ ಕರೆದು ವಿಚಾರಿಸಿದಾಗ “ನಾನು ಜಮಖಂಡಿಗೆ ತೆರಳಬೇಕು. ಅಂಗವಿಕಲ ಪಾಸ್‌ ಅಥವಾ ಹಣ ಇಲ್ಲ. ಅದಕ್ಕಾಗಿ ಈ ರೀತಿ ಮಾಡಿದ್ದೇನೆ’ ಎಂದು ಹೇಳಿದ. ನಂತರ,ನಿರ್ವಾಹಕ ಸ್ವಂತ ಹಣದಲ್ಲಿ ಟಿಕೆಟ್‌ ನೀಡಿ ಆತನನ್ನು ಜಮಖಂಡಿವರೆಗೆ ಕರೆದೊಯ್ದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next