Advertisement

ಕಸ ಎಸೆದ ವಿಚಾರಕ್ಕೆ ಗಲಾಟೆ;ಯುವಕನ ಪ್ರಾಣವೇ ಹೋಯ್ತು!

10:13 AM Jan 20, 2018 | Team Udayavani |

ಬೆಂಗಳೂರು: ಕಟ್ಟಡದಿಂದ ಕಸ ಕೆಳಕ್ಕೆ ಎಸದ ಎಂಬ ಕಾರಣಕ್ಕೆಉಂಟಾದ ವಾಗ್ವಾದ ಯುವಕನೊಬ್ಬನ ಹತ್ಯೆಯಲ್ಲಿ ಅಂತ್ಯವಾಗಿರುವ ಕಳವಳಕಾರಿ ಘಟನೆ ಶುಕ್ರವಾರ ರಾತ್ರಿ  ಗಿರಿನಗರದ ಪಿಇಎಸ್‌ ಕಾಲೇಜಿನ ಬಳಿ ನಡೆದಿದೆ. 

Advertisement

ತುಮಕೂರು ಮೂಲದ ದೇವರಾಜ್‌ ಎಂಬ ಯುವಕ ರಾತ್ರಿ ಊಟ ಮುಗಿಸಿ ಕಸವನ್ನು ತೊಟ್ಟೆಯಲ್ಲಿ ಕಟ್ಟಿ ಮೇಲ್‌ವುಹಡಿಯಿಂದ ಕೆಳಕ್ಕೆ ಎಸೆದಿದ್ದಾನೆ. ಇದನ್ನು ನೋಡಿದ ಮೂವರು ಪ್ರಶ್ನಿಸಿ  ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ದೇವ್‌ರಾಜ್‌ ಮತ್ತು ಸ್ಥಳೀಯರ ನಡುವೆ ತೀವ್ರ ವಾಗ್ವಾದ ಉಂಟಾಗಿದೆ.

ಕಟ್ಟಡದ ಮೇಲೆ ತೆರಳಿದ ಕೆಲವರು ದೇವ್‌ರಾಜ್‌ನನ್ನು ಕಟ್ಟಡದಿಂದ ಕೆಳಕ್ಕೆತಳ್ಳಿದ್ದಾರೆ ಎನ್ನಲಾಗಿದೆ. ಪರಿಣಾಮವಾಗಿ ದೇವ್‌ರಾಜ್‌ ಸ್ಥಳದಲ್ಲೆ ದಾರುಣವಾಗಿ ಸಾವನ್ನಪ್ಪಿದ್ದಾನೆ. 

ಘಟನೆಯ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಗಿರಿನಗರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next